ಉಳ್ಳಾಲ: ಸಮುದ್ರದ ಅಲೆಗಳಿಗೆ ಸಿಲುಕಿದ ಆರು ಮಂದಿಯ ರಕ್ಷಣೆ

Update: 2018-04-23 18:07 GMT

ಉಳ್ಳಾಲ, ಎ. 23: ಉಳ್ಳಾಲ ಮೊಗವೀರ ಪಟ್ಣ ಬೀಚ್ ಬಳಿ ಸಮುದ್ರದ ಅಲೆಗಳಿಗೆ ಸಿಲುಕಿದ ಅರು ಮಂದಿಯನ್ನು ಮೊಗವೀರಪಟ್ಣದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ರಕ್ಷಿಸಿದ ಘಟನೆ ಸೋಮವಾರ ನಡೆದಿದ್ದು ಯಾವುದೇ ಪ್ರಕರಣ ದಾಖಲಾಗಿಲ್ಲ.

ಸಮುದ್ರದ ಅಲೆಗಳಿಗೆ ಸಿಲುಕಿದವರು ಬಜ್ಪೆ ಕೆಂಜಾರು ನಿವಾಸಿಗಳು ಮಂಗಳೂರಿಗೆ ಅಗಮಿಸಿದ್ದ ಇವರು ಉಳ್ಳಾಲ ದರ್ಗಾ ಭೇಟಿ ನೀಡಿ ಬಳಿಕ ಮೊಗವೀರಪಟ್ಣ ಬಳಿ ಬೀಚ್‌ಗೆ ಅಗಮಿಸಿದ್ದು, ನೀರಿನಲ್ಲಿ ಅಟವಾಡುತ್ತಿದ್ದಾಗ ನಾಲ್ವರು ಮಕ್ಕಳು ಸಹಿತ ಇಬ್ಬರು ಮಹಿಳೆಯರು ಸಮುದ್ರದ ಅಲೆಗಳಿಗೆ ಸಿಲುಕಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರಾದ ಯಶ್‌ಪಾಲ್ ಕಾಂಚನ್, ವಿಕ್ಕಿಪುತ್ರನ್, ಮೋಹನ್ ಕೋಟ್ಯಾನ್, ಹರೀಶ್ ಕಾಂಚನ್, ಶಂಕರ ಬಂಗೇರ, ರವಿಪುತ್ರನ್, ಕುನಾಲ್ ಮತ್ತು ಇತರ ಸದಸ್ಯರೊಂದಿಗೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News