ಬಿದ್ದು ಸಿಕ್ಕಿದ ಮೊಬೈಲ್‌ನ್ನು ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಅಬ್ದುಲ್ ಖಾದರ್

Update: 2018-04-25 06:58 GMT

ಮಂಗಳೂರು, ಎ.25: ಬಿದ್ದು ಸಿಕ್ಕಿದ ಬೆಲೆಬಾಳುವ ಮೊಬೈಲ್ ಫೋನ್‌ನ್ನು ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಮಾಜಿ ಗೃಹರಕ್ಷಕ ದಳದ ಸಿಬ್ಬಂದಿ ಕೆ.ಸಿ.ಅಬ್ದುಲ್ ಖಾದರ್ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 ಕಂಕನಾಡಿಯ ಅಂಗಡಿಯೊಂದರ ಬಳಿ ಮಂಗಳವಾರ ಬೆಳಗ್ಗೆ ಅನಾಥವಾಗಿದ್ದ ನೆಲದಲ್ಲಿ ಬಿದ್ದಿದ್ದ ಐ ಫೋನ್ ಮೊಬೈಲನ್ನು ಗಮನಿಸಿದ ಅಬ್ದುಲ್ ಖಾದರ್ ಅದನ್ನು ಎತ್ತಿಕೊಂಡಿದ್ದರು. ಸ್ವಲ್ಪ ಹೊತ್ತಿನ ಬಳಿಕ ಆ ಮೊಬೈಲ್‌ಗೆ ಕರೆಯೊಂದು ಬಂದಿದೆ. ಕರೆಯನ್ನು ಅಬ್ದುಲ್ ಖಾದರ್ ಸ್ವೀಕರಿಸಿದಾಗ ಅದು ಕಂಕನಾಡಿಯ ಉದ್ಯಮಿ ಶಕೀಲ್ ಎಂಬವರಿಗೆ ಸೇರಿದ್ದೆಂದು ತಿಳಿದುಬಂದಿತ್ತು. ಪೋನ್ ಮಾಡಿದ್ದ ಶಕೀಲ್‌ರಿಗೆ ತನ್ನ ಮಾಹಿತಿ ನೀಡಿದ ಅಬ್ದುಲ್ ಖಾದರ್ ಮೊಬೈಲನ್ನು ಅದರ ವಾರಸುದಾರರಿಗೆ ಒಪ್ಪಿಸಿದ್ದಾರೆ. ಅಬ್ದುಲ್ ಖಾದರ್ ಪ್ರಾಮಾಣಿಕತೆಗೆ ಶಕೀಲ್ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News