ಫರಂಗಿಪೇಟೆ: ಸಮಸ್ತ ಆಶಯ ಅನಾವರಣ ಸಮ್ಮೇಳನ
ಫರಂಗಿಪೇಟೆ, ಎ.27: ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಸಮಿತಿಯ ವತಿಯಿಂದ ಸಮಸ್ತ ಆಶಯ ಅನಾವರಣ ಸಮ್ಮೇಳನವು ಫರಂಗಿಪೇಟೆಯ ಮರ್ಹೂಮ್ ಶರೀಫ್ ದಾರಿಮಿ ವೇದಿಕೆಯಲ್ಲಿ ಜರುಗಿತು.
ಫರಂಗಿಪೇಟೆ ಮಸೀದಿ ಖತೀಬ್ ಅಲ್ಹಾಜ್ ಅಬ್ಬಾಸ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಆಲವಿ ದಾರಿಮಿ ಕುಝಿಮಣ್ಣಮ್ ಮುಖ್ಯ ಭಾಷಣ ಮಾಡಿದರು.ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ದುಆಗೈದರು
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಷಾದ್ ಹುಸೈನ್ ದಾರಿಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷ ಬಾತಿಶ್ ಕೊಡ್ಲಿಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಅಮೀರ್ ತಂಙಳ್ ಕಿನ್ಯ, ಜಿಲ್ಲಾ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಫರಂಗಿಪೇಟೆ ಮಸೀದಿಯ ಅಧ್ಯಕ್ಷ ಮುಹಮ್ಮದ್ ಬಾವ, ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬೂ ಸ್ವಾಲಿಹ್ ಫೈಝಿ, ಫರಂಗಿಪೇಟೆ ಕ್ಲಸ್ಟರ್ ಅಧ್ಯಕ್ಷ ಮುಹಮ್ಮದ್ ಬುಖಾರಿ, ಬಿ.ಸಿ.ರೋಡ್ ಕ್ಲಸ್ಟರ್ ಅಧ್ಯಕ್ಷ ಅಲ್ತಾಫ್ ಮಿತ್ತಬೈಲ್, ಕುಂಪನಮಜಲು ಅರಫಾ ಜುಮಾ ಮಸೀದಿಯ ಖತೀಬ್ ಉಬೈದುಲ್ಲಾ ಅಝ್ಹರಿ, ಶೇಖ್ ಮುಹಮ್ಮದ್ ಇರ್ಫಾನಿ ಫೈಝಿ ಜಲಾಲಿಯ ನಗರ, ಬಂಟ್ವಾಳ ಮುದರ್ರಿಸ್ ಅಬೂ ಝಾಹಿರ ಉಸ್ಮಾನ್ ದಾರಿಮಿ, ಖಲೀಲುರ್ರಹ್ಮಾನ್ ದಾರಿಮಿ, ಅಬ್ದುಲ್ ಮಜೀದ್ ಫೈಝಿ ನಂದಾವರ, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್, ಫರಂಗಿಪೇಟೆ ಶಾಖೆ ಅಧ್ಯಕ್ಷ ಮಜೀದ್, ಫರಂಗಿಪೇಟೆ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ವಲಯ ಕಾರ್ಯದರ್ಶಿ ಹನೀಫ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು. ಕಮರುದ್ದೀನ್ ನಿರೂಪಿಸಿದರು