ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಪ್ರಣಾಳಿಕೆ ಬಿಡುಗಡೆ

Update: 2018-04-28 12:13 GMT

ಮಂಗಳೂರು, ಎ.28: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆರ್. ಶ್ರೀಕರ ಪ್ರಭು ತನ್ನ ಚುನಾವಣಾ ಪ್ರಣಾಳಿಕೆಯನ್ನು ಶನಿವಾರ ಮಾಧ್ಯಮ ಸ್ನೇಹಿತರ ಸಮ್ಮುಖ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ತಾವು ಶಾಸಕರಾದ ಮೇಲೆ ಬಾವುಟಗುಡ್ಡೆ ರಸ್ತೆಗೆ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಹೆಸರನ್ನು ಅನಾವರಣಗೊಳಿಸುವ ಕೆಲಸವನ್ನು ಆದ್ಯತೆಯಲ್ಲಿ ನಡೆಸುವುದಾಗಿ ತಿಳಿಸಿದರು. ಉಳಿದಂತೆ ತನ್ನ ಪ್ರಣಾಳಿಕೆಯಲ್ಲಿ ನಗರದ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನ ಮಾರ್ಗಗಳನ್ನು ತಿಳಿಸಿರುವ ಶ್ರೀಕರ ಪ್ರಭು ತನ್ನನ್ನು ಬಹುಮತದಿಂದ ಆಯ್ಕೆಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭ ಶ್ರೀಕರ ಪ್ರಭು ಅಭಿಮಾನಿ ಬಳಗದ ಅಧ್ಯಕ್ಷ ಕೆ.ಪಿ.ಶೆಟ್ಟಿ ಬೇಡೆಮಾರ್, ಸಂಚಾಲಕ ಅಶ್ವಿತ್ ಕುಮಾರ್, ಸುರೇಶ್ ಶೆಟ್ಟಿ, ಅವಿನಾಶ್ ಶೆಟ್ಟಿ, ಸುನೀಲ್ ಬಜಿಲಕೇರಿ, ನಿತಿನ್ ಸುವರ್ಣ, ಮಹೇಶ್ ಭಟ್, ಜೈರಾಮ್ ಕಾಮತ್, ಮೂಸಾ ರಫೀಕ್, ಕೇಶವ ಬಪ್ಪಾಲ್ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News