ಮಂಗಳೂರು: ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿಗೆ ಬಿಜೆಪಿ ಕಾರ್ಯಕರ್ತರಿಂದ ಘೇರಾವ್

Update: 2018-05-05 17:34 GMT

ಮಂಗಳೂರು, ಮೇ 5: ನಗರದಲ್ಲಿ ಇಂದು ನಡೆದ ಬಿಜೆಪಿ ಸಮಾವೇಶದ ವರದಿಗಾರಿಕೆಗಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿಯವರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ನಗರದ ನೆಹರೂ ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆದಿತ್ತು. ಈ ಸಂದರ್ಭ ರಾಜ್ ದೀಪ್ ಸರ್ದೇಸಾಯಿಯವರು ಕಾರ್ಯಕ್ರಮದ ವರದಿಗಾರಿಕೆ ನಡೆಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ‘ಮೋದಿ’, ‘ಮೋದಿ’ ಎಂದು ಕಿರುಚಿದ್ದರಲ್ಲದೆ, ಅವರಿಗೆ ಮುತ್ತಿಗೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಸರ್ದೇಸಾಯಿಯವರು ವರದಿಗಾರಿಕೆ ಸಂದರ್ಭ ಬಿಜೆಪಿ ಹಾಗು ಆರೆಸ್ಸೆಸ್ ಬಗ್ಗೆ ಮಾತನಾಡಿದ್ದರಿಂದ ಬಿಜೆಪಿ ಕಾರ್ಯಕರ್ತರು ಕೆರಳಿದ್ದಾರೆ. ಆನಂತರ ನಿರಂತರವಾಗಿ ‘ಮೋದಿ’, ‘ಮೋದಿ’ ಎಂದು ಕಿರುಚುತ್ತಾ ವರದಿಗಾರಿಕೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ ಇದರಿಂದ ವಿಚಲಿತರಾಗದ ಸರ್ದೇಸಾಯಿ ವರದಿಗಾರಿಕೆಯನ್ನು ಮುಂದುವರಿಸಿದ್ದಾರೆ. ಮೋದಿ ಭಾಷಣಕ್ಕೆ ಕಾಯದ ಸರ್ದೇಸಾಯಿ ನಂತರ ಕಾರ್ಯಕ್ರಮದಿಂದ ತೆರಳಿದ್ದಾರೆ ಎನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News