ಪೊಲೀಸ್ ಅಧಿಕಾರಿಯ ಪುತ್ರನ ಸಂಶಯಾಸ್ಪದ ಸಾವು

Update: 2018-05-09 15:05 GMT

ಮುಂಬೈ, ಮೇ 9: ಮುಂಬೈ ಪೊಲೀಸ್ ಅಧಿಕಾರಿಯ 20ರ ಹರೆಯದ ಪುತ್ರನ ಶವ ಉಪನಗರ ಗೋರೆಗಾಂವ್‌ನಲ್ಲಿ ಪೊದೆಗಳ ಎಡೆಯಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಮುಂಬೈ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿ ನರೇಂದ್ರ ಶಿಂಧೆಯವರ ಪುತ್ರ ಅಥರ್ವ ಶಿಂಧೆ ಮೃತಪಟ್ಟ ಯುವಕ. ಶಿಂಧೆ ಕುಟುಂಬದವರು ಕಾಂಡಿವಲಿಯ ಠಾಕೂರ್ ಕಾಂಪ್ಲೆಕ್ಸ್‌ನಲ್ಲಿ ವಾಸ್ತವ್ಯವಿದ್ದು, ಅಥರ್ವ ಶಿಂಧೆಯ ಮೃತದೇಹ ಏರೇ ಕಾಲೊನಿಯಲ್ಲಿರುವ ಫಿಲ್ಮ್ ಸಿಟಿ ಬಳಿಯಲ್ಲಿ ಪೊದೆಗಳೆಡೆಯಲ್ಲಿ ಪತ್ತೆಯಾಗಿದೆ. ಮೃತದೇಹದ ಕುತ್ತಿಗೆ ಹಾಗೂ ಕಣ್ಣಿನ ಮೇಲೆ ಗಾಯದ ಗುರುತು ಇತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News