ವಳಚ್ಚಿಲ್ ಹೆದ್ದಾರಿ ಕುಸಿಯುವ ಭೀತಿ: ದ.ಕ.ಜಿಲ್ಲಾಧಿಕಾರಿಗೆ ಸ್ಥಳೀಯರಿಂದ ಮನವಿ

Update: 2018-05-11 05:55 GMT

ಫರಂಗಿಪೇಟೆ, ಮೇ 11: ಮಂಗಳೂರು ತಾಲೂಕು ಅಡ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಕುಳ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ವಳಚ್ಚಿಲ್ ಎಂಬಲ್ಲಿ ಎರಡು ಕಡೆ ಮಣ್ಣು ಕುಸಿದಿದ್ದು, ಈ ಹಿಂದೆ ಮಣ್ಣು ಕುಸಿದು ಒಂದು ಮನೆ ಸಂಪೂರ್ಣ ನಾಶವಾಗಿದೆ  ಅಲ್ಲದೆ ಈ ಬಾರಿಯ ಮಳೆಗಾಲದಲ್ಲಿ ಮಣ್ಣು ಕುಸಿದು ಹಲವಾರು ಮನೆಗಳಿಗೆ ಹಾಗೂ ನಿವಾಸಿಗಳಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿದ್ದು, ಅದರಿಂದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತಡೆಗೋಡೆಯನ್ನು ನಿರ್ಮಿಸುವಂತೆ ಅಗ್ರಹಿಸಿ ದ.ಕ. ಜಿಲ್ಲಾಧಿಕಾರಿಗೆ ನಿಯೋಗ ಮನವಿ ನೀಡಿದೆ.

ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ತಕ್ಷಣವೇ ಸ್ಪಂದಿಸುವ ಭರವಸೆಯನ್ನು ನೀಡಿದರು.  ನಿಯೋಗದಲ್ಲಿ ಎಸ್.ಡಿ‌.ಪಿ.ಐ. ಗ್ರಾಮ ಪಂಚಾಯತ್ ಸದಸ್ಯ ಯಾಸಿನ್ ಅರ್ಕುಳ ಹಾಗೂ ಸ್ಥಳೀಯ ಮುಖಂಡರಾದ ಯೂಸುಫ್ ಹಾಗೂ ಹಂಝ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News