ಇದೆಂತಹ ರಾಜಕೀಯ?

Update: 2018-05-17 18:31 GMT

ಮಾನ್ಯರೇ,

ರಾಜ್ಯದ ರಾಜಕೀಯದಲ್ಲಿ ಕಳೆದೆರಡು ದಿನಗಳಿಂದ ನಡೆಯುವ ವಿದ್ಯಮಾನಗಳನ್ನು ಗಮನಿಸಿದಾಗ ಇಡೀ ರಾಜ್ಯದ ಜನತೆ ತಲೆತಗ್ಗಿಸುವಂತಾಗಿದೆ. ಬಹುಮತವಿಲ್ಲದಿದ್ದರೂ ಅಧಿಕಾರ ದಾಹದಿಂದ ವಾಮಮಾರ್ಗದಿಂದ ಅಧಿಕಾರ ಗಳಿಸಲು ಪ್ರಯತ್ನಿಸುತ್ತಿರುವ ಕೆಲವು ರಾಜಕಾರಣಿಗಳನ್ನು ಗಮನಿಸುವಾಗ ವಾಕರಿಕೆ ಬರುತ್ತಿದೆ.
ಸಂವಿಧಾನ ತತ್ವಗಳನ್ನು ಗಾಳಿಗೆ ತೂರಿ ಇವರು ಅಧಿಕಾರವೇನೋ ಹಿಡಿಯಬಹುದು. ಆದರೆ ಇಡೀ ದೇಶದ ಜನತೆ ಇವರ ಸಂವಿಧಾನ ವಿರೋಧಿ ಕೃತ್ಯಗಳನ್ನು ನೋಡಿ ಸುಮ್ಮನಿರುತ್ತಾರೆಂದು ಭಾವಿಸುವುದು ಮೂರ್ಖತನ. ಮುಂಬರುವ ಚುನಾವಣೆಗಳಲ್ಲಿ ಈ ಕೃತ್ಯಗಳಿಗೆ ತಕ್ಕ ಪಾಠ ಕಲಿಸುತ್ತಾರೆ.
ಹಣ, ಅಧಿಕಾರದ ಬಲದಿಂದ ಮುಖ್ಯಮಂತ್ರಿ ಕುರ್ಚಿ ತಾತ್ಕಾಲಿಕವಾಗಿ ಗಳಿಸಿಕೊಳ್ಳಬಹುದಾದರೂ ಜನರ ಹೃದಯದಲ್ಲಿ ಇವರು ಶಾಶ್ವತವಾಗಿ ದೂರವಾಗುವುದು ಖಂಡಿತ.

Writer - -ರಮೇಶ್ ಎನ್. ಆರ್., ಮೈಸೂರು

contributor

Editor - -ರಮೇಶ್ ಎನ್. ಆರ್., ಮೈಸೂರು

contributor

Similar News