ಗಾಳಿ ಮಳೆ: ಉರುಳಿ ಬಿದ್ದ ಶಿಬರೂರು ದೈವಸ್ಥಾನದ ಕೊಡಿಮರ

Update: 2018-05-20 05:53 GMT

ಮಂಗಳೂರು, ಮೇ 20: ಶುಕ್ರವಾರ ಮತ್ತು ಶನಿವಾರ ಸುರಿದ ಮಳೆ ಹಾಗು ಗಾಳಿಗೆ ಶಿಬರೂರು ದೈವಸ್ಥಾನದ ಕೊಡಿಮರ ಉರುಳಿ ಬಿದ್ದಿರುವುದಾಗಿ ತಿಳಿದುಬಂದಿದೆ. ಘಟನೆಯಿಂದ ದೇವಸ್ಥಾನದ ಹಂಚುಗಳಿಗೆ ಹಾನಿಯಾಗಿದೆ. 

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅತ್ತೂರುಗುತ್ತೂರಿನ ಪ್ರಸನ್ನ ಶೆಟ್ಟಿ ಅವರು, ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಕೊಡಿಮರವು ಗಾಳಿ, ಮಳೆ ಹಾಗು ದೈವದ ಅಸಮಾಧಾನಕ್ಕೆ ಕಾರಣವಾಗಿ ದೈವಸ್ಥಾನದ ಮೇಲೆ ಬಿದ್ದಿದ್ದು, ಈ ಬಗ್ಗೆ ದೈವ ಹಾಗು ಆಡಳಿತ ಮಂಡಳಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News