ಮಂಗಳೂರು: ಮಂಗಳಮುಖಿಯರಿಂದ ಸ್ವಚ್ಛತಾ ಶ್ರಮದಾನ

Update: 2018-05-20 10:47 GMT

ಮಂಗಳೂರು, ಮೇ 20: ರಾಮಕೃಷ್ಣ ಮಿಶನ್ ವತಿಯಿಂದ ‘ಸ್ವಚ್ಛ ಮಂಗಳೂರು ಅಭಿಯಾನ’ದ ವತಿಯಿಂದ ಉರ್ವಸ್ಟೋರ್ ಮತ್ತು ವಾಮಂಜೂರು ಚೆಕ್‌ಪೋಸ್ಟ್ ಬಳಿ ರವಿವಾರ ನಡೆಯಿತು.

ಉರ್ವಸ್ಟೋರ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಫೆಡರಲ್ ಬ್ಯಾಂಕ್‌ನ ಪ್ರಾದೇಶಿಕ ಮುಖ್ಯಸ್ಥ ಶ್ರೀಕಾಂತ ಕೆ. ಹಾಗೂ ಸಿ. ದೇವದಾಸ್ ಕಾಮತ್ ಉದ್ಘಾಟಿ ಸಿದರು. ಕ್ಯಾ. ಗಣೇಶ್ ಕಾರ್ಣಿಕ್, ಡಾ.ಧನೇಶ್ ಕುಮಾರ್, ಕಮಲಾಕ್ಷ ಪೈ ಮತ್ತಿತರರು ಉಪಸ್ಥಿತರಿದ್ದರು.

ಮಂಗಳಮುಖಿಯರಿಂದ ಶ್ರಮದಾನ: ಉರ್ವಸ್ಟೋರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 20ಕ್ಕೂ ಮಂಗಳಮುಖಿಯರು ಪಾಲ್ಗೊಂಡಿದ್ದರು. ಅಂಗಡಿಗುಡ್ಡೆ ಹಾಗೂ ಚಿಲಿಂಬಿಯತ್ತ ಸಾಗುವ ಮುಖ್ಯರಸ್ತೆಗಳನ್ನು ಮಂಗಳಮುಖಿಯರಾದ ರಮ್ಯಾಗೌಡ, ವರ್ಷಾ ಶೆಟ್ಟಿ ಹಾಸನ, ಪಲ್ಲಗೌಡ ಮತ್ತಿತರರು ಶುಚಿಗೊಳಿಸಿ ಗಮನ ಸೆಳೆದರು.

ವಾಮಂಜೂರು ಚೆಕ್‌ಪೋಸ್ಟ್ ಬಳಿ ನಡೆದ ಕಾರ್ಯಕ್ರಮವನ್ನು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಉದ್ಘಾಟಿಸಿದರು. ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಬಾಲಕೃಷ್ಣ, ರಿಯಾಝ್ ವಾಮಂಜೂರು, ಚಾರ್ಲ್ಸ್ ಸಾಲಿನ್ಸ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News