ಎಲಿಮಲೆಯಲ್ಲಿ ರಮಝಾನ್ ಕಿಟ್ ವಿತರಣೆ, ಇಫ್ತಾರ್ ಕೂಟ

Update: 2018-05-21 07:58 GMT

ಮಂಗಳೂರು, ಮೇ 21:  ಎಲಿಮಲೆಯ ನುಸ್ರತುಲ್ ಇಸ್ಲಾಮ್ ಅಸೋಸಿಯೇಶನ್  ವತಿಯಿಂದ ಮರ್ಹೂಮ್ ಪಿ.ಟಿ.ಉಸ್ತಾದರ ಅನುಸ್ಮರಣೆ ಹಾಗೂ ಬಡ ಕುಟುಂಬಗಳಿಗೆ ರಮಝಾನ್ ಕಿಟ್ ವಿತರಣೆ ಮತ್ತು ಇಫ್ತಾರ್ ಕಾರ್ಯಕ್ರಮವು ಎಲಿಮಲೆಯಲ್ಲಿ ನಡೆಯಿತು.

ಇದೇ ವೇಳೆ ಎಲಿಮಲೆ ಮುದರ್ರಿಸ್ ಅಬ್ದುರ್ರಝಾಕ್ ಸಖಾಫಿ ಕಳಂಜಿಬೈಲು ನೇತೃತ್ವದಲ್ಲಿ ತಹ್ಲೀಲ್ ಸಮರ್ಪಣೆ ಜರುಗಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಜಮಾಅತಿಗೊಳಪಟ್ಟ ಅರ್ಹ ಬಡ ಕುಟುಂಬಗಳಿಗೆ ರಮಝಾನ್ ಕಿಟ್ ಗಳನ್ನು ಜಮಾಅತ್ ಕಮಿಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ ವಿತರಿಸಿದರು. ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಮಾಅತ್ ಉಪಾಧ್ಯಕ್ಷ ಮಹಮದ್ ಕುಂಞಿ ಮೇಲೆಬೈಲು, ಜಮಾಅತ್ ಕಾರ್ಯದರ್ಶಿ ಹನೀಫ್ ಮೆತ್ತಡ್ಕ, ಸ್ಥಳೀಯ ಮದ್ರಸ ಮುಖ್ಯೋಪಾಧ್ಯಾಯ ಮಹಮೂದ್ ಸಖಾಫಿ, ಜೀರ್ಮಕ್ಕಿ ಇಮಾಂ ಸೂಫಿ ಮುಸ್ಲಿಯಾರ್  ಉಪಸ್ಥಿತರಿದ್ದರು.

ನುಸ್ರತ್ ಉಪಾಧ್ಯಕ್ಷ  ಕಲಂದರ್ ಎಲಿಮಲೆ, ಕೋಶಾಧಿಕಾರಿ ಜಿ.ಎಸ್.ಅಬ್ದುಲ್ಲ, ಜತೆ ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ, ಜಮಾಅತ್ ಕೋಶಾಧಿಕಾರಿ ಖಾದರ್ ಪಾಣಾಜೆ, ಜೀರ್ಮಕಿ ಮಸೀದಿಯ ಅಧ್ಯಕ್ಷಯ ಜಿ.ಎಚ್.ಇಬ್ರಾಹೀಂ, ಸಂಸ್ಥೆಯ ಸದಸ್ಯರಾದ ಹೈದರ್ ಹಾಜಿ, ಹನೀಫ್ ಜೀರ್ಮಕ್ಕಿ, ಇಬ್ರಾಹೀಂ ಪಳ್ಳಿಕ್ಕಲ್, ಖಾದರ್ ಅತ್ತಿಮಾರಡ್ಕ, ಸುಲೈಮಾನ್ ಮೆತ್ತಡ್ಕ ಉಪಸ್ಥಿತರಿದ್ದರು.

 ಕಾರ್ಯದರ್ಶಿ ಸೂಫಿ ಎಲಿಮಲೆ  ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ಇಫ್ತಾರ್ ಕೂಟ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News