ಫಳ್ನೀರ್: ಜರಿದ ಮಣ್ಣು; ಅಪಾಯದಲ್ಲಿ ಮನೆ

Update: 2018-05-30 08:48 GMT

ಮಂಗಳೂರು, ಮೇ 30: ನಗರದ ಫಳ್ನೀರ್ ಬಳಿ ಮಣ್ಣು ಜರಿದ ಪರಿಣಾಮ ಮನೆಯೊಂದು ಅಪಾಯದ ಸ್ಥಿತಿ ಎದುರಿಸುತ್ತಿದ್ದು, ಮನೆ ಮಂದಿ ತೀವ್ರ ಆತಂಕಿತರಾಗಿದ್ದಾರೆ.

ಹೊಸ ಫ್ಲಾಟ್‌ವೊಂದರ ನಿರ್ಮಾಣಕ್ಕಾಗಿ ಮಣ್ಣನ್ನು ಜೆಸಿಬಿ ಮೂಲಕ ತೆಗೆಯಲಾಗಿದ್ದು, ಮಂಗಳವಾರ ಸುರಿದ ಭಾರೀ ಮಳೆಗೆ ಮಣ್ಣು ಜರಿಯಲಾರಂಭಿಸಿದೆ. ತಕ್ಷಣ ಸಂಬಂಧಪಟ್ಟವರು ಜರಿದ ಭಾಗಕ್ಕೆ ಪ್ಲಾಸ್ಟಿಕ್ ಕವರ್ ಹಾಕಿದ್ದಾರೆ. ಆದರೂ ಮನೆಯ ಒಂದು ಬದಿಯ ಕೆಲಭಾಗದ ಮಣ್ಣು ಭಾಗಶಃ ಜರಿದಿದ್ದು, ಮನೆಯು ಬಹುತೇಕ ಅಪಾಯದಲ್ಲಿದೆ.

ಈಗಾಗಲೇ ಮಂಗಳೂರು ಮತ್ತು ಉಡುಪಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ಆಗಮಿಸಿದ್ದು, ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News