ಅಡ್ಡೂರು ಸೆಂಟ್ರಲ್ ಕಮಿಟಿಯಿಂದ ಶಾಲಾ ವಾಹನ ದೇಣಿಗೆ

Update: 2018-05-31 11:34 GMT

ಅಡ್ಡೂರು,ಮೇ 31: ಇಲ್ಲಿನ ಹಿರಿಯ ಪ್ರಾಥಮಿಕ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಡ್ಡೂರು ಸೆಂಟ್ರಲ್ ಕಮಿಟಿಯಿಂದ ಶಾಲಾ ವಾಹನವನ್ನು ಗುರುವಾರ ದೇಣಿಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಅಡ್ಡೂರು ಸೆಂಟ್ರಲ್ ಕಮಿಟಿ ಸದಸ್ಯರಾದ ಇಸ್ಮಾಯಿಲ್ ಬಂಡಸಾಲೆ, ಮುತ್ತಲಿಬ್ ದೆಮ್ಮಲೆ, ಫರ್ವೀಝ್ ತೋಕೂರು, ನವಾಝ್, ಅಝ್ಮೀರ್, ಇಸ್ಮಾಯಿಲ್ ಅಂಗಡಿ ಮನೆ, ಎ.ಪಿ. ಅಶ್ರಫ್, ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ, ಎಸ್‍ಡಿಎಂಸಿ ಅಧ್ಯಕ್ಷ ಸಿದ್ದೀಕ್ ಕೆಳಗಿನಕೆರೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಕೆ.ರಿಯಾಝ್, ಶಾಲಾ ಹಿತ ರಕ್ಷಣ ಸಮಿತಿ ಅಧ್ಯಕ್ಷ ಡಾ.ಇ.ಕೆ. ಸಿದ್ದೀಕ್, ಎಸ್.ಬಾವುಞಿ, ಅಹ್ಮದ್ ಬಾವಾ, ಅನ್ವರ್ ಗೋಳಿಪಡ್ಪು, ಜಬ್ಬಾರ್ ಕೆಳಗಿನಕೆರೆ, ಕಬೀರ್ ಟಿಬೇಟ್, ಕಮಲ್ ಕಾಂಜಿಲಕೋಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News