ಆರೆಸ್ಸೆಸ್ ಸ್ಥಾಪಕ ಹೆಡ್ಗೆವಾರ್ ‘ಭಾರತ ಮಾತೆಯ ಶ್ರೇಷ್ಟ ಪುತ್ರ’ ಎಂದ ಪ್ರಣಬ್ ಮುಖರ್ಜಿ
Update: 2018-06-07 14:25 GMT
ನಾಗ್ಪುರ, ಜೂ.7: ಆರೆಸ್ಸೆಸ್ ಸ್ಥಾಪಕ ಕೆ.ಬಿ.ಹೆಡ್ಗೆವಾರ್ ‘ಭಾರತ ಮಾತೆಯ ಶ್ರೇಷ್ಟ ಪುತ್ರ’ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಣ್ಣಿಸಿದ್ದಾರೆ.
ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಗ್ಪುರಕ್ಕೆ ತೆರಳಿರುವ ಮುಖರ್ಜಿ ಹೆಡ್ಗೆವಾರ್ ರ ಜನ್ಮಸ್ಥಳಕ್ಕೆ ಭೇಟಿ ನೀಡಿ, “ಭಾರತ ಮಾತೆಯ ಓರ್ವ ಶ್ರೇಷ್ಟ ಪುತ್ರನನ್ನು ಗೌರವಿಸಲು ನಾನು ಇಲ್ಲಿಗೆ ಆಗಮಿಸಿದ್ದೇನೆ” ಎಂದು ಸಂದರ್ಶಕರ ಪುಸ್ತಕದಲ್ಲಿ ಅವರು ಬರೆದಿದ್ದಾರೆ.
ರೇಶಿಂಭಾಗ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಪ್ರಣಬ್ ರನ್ನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ವಾಗತಿಸಿದರು.