ಆರೆಸ್ಸೆಸ್ ಸ್ಥಾಪಕ ಹೆಡ್ಗೆವಾರ್ ‘ಭಾರತ ಮಾತೆಯ ಶ್ರೇಷ್ಟ ಪುತ್ರ’ ಎಂದ ಪ್ರಣಬ್ ಮುಖರ್ಜಿ

Update: 2018-06-07 14:25 GMT

ನಾಗ್ಪುರ, ಜೂ.7: ಆರೆಸ್ಸೆಸ್ ಸ್ಥಾಪಕ ಕೆ.ಬಿ.ಹೆಡ್ಗೆವಾರ್ ‘ಭಾರತ ಮಾತೆಯ ಶ್ರೇಷ್ಟ ಪುತ್ರ’ ಎಂದು  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಣ್ಣಿಸಿದ್ದಾರೆ.

ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಗ್ಪುರಕ್ಕೆ ತೆರಳಿರುವ ಮುಖರ್ಜಿ ಹೆಡ್ಗೆವಾರ್ ರ ಜನ್ಮಸ್ಥಳಕ್ಕೆ ಭೇಟಿ ನೀಡಿ, “ಭಾರತ ಮಾತೆಯ ಓರ್ವ ಶ್ರೇಷ್ಟ ಪುತ್ರನನ್ನು ಗೌರವಿಸಲು ನಾನು ಇಲ್ಲಿಗೆ ಆಗಮಿಸಿದ್ದೇನೆ” ಎಂದು ಸಂದರ್ಶಕರ ಪುಸ್ತಕದಲ್ಲಿ ಅವರು ಬರೆದಿದ್ದಾರೆ.

ರೇಶಿಂಭಾಗ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಪ್ರಣಬ್ ರನ್ನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News