ರಮಝಾನ್ ಮುಸ್ಲಿಮರು ಸಂತೋಷಪಡುವ ತಿಂಗಳು: ಸಿರಾಜುದ್ದೀನ್ ಝೈನಿ

Update: 2018-06-09 09:59 GMT

ಶಿರ್ವ, ಜೂ.9: ಮುಸ್ಲಿಮರು ರಮಝಾನ್ ತಿಂಗಳನ್ನು ಅತ್ಯಂತ ಪ್ರೀತಿಪೂರ್ವಕ ಸ್ವಾಗತಿಸುತ್ತಾರೆ.ಸ್ವಯಂ ಸ್ವಚ್ಛತೆ, ಮನೆ, ಪರಿಸರ ಸ್ವಚ್ಛತೆಯ ಜೊತೆಗೆ ಸ್ವಯಂ ಪ್ರೇರಿತ ಝಕಾತ್ ನೀಡಲು ಮುಂದೆ ಬರುತ್ತಾರೆ. ಸಮಸ್ತ ಮುಸ್ಲಿಮರು ಅತ್ಯಂತ ಸಂತೋಷ ಪಡುವ ತಿಂಗಳಾಗಿದೆ ರಮಝಾನ್ ಎಂದು ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬ್ ಸಿರಾಜುದ್ದೀನ್ ಝೈನಿ ನುಡಿದರು.

ಶಿರ್ವ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶಿರ್ವ ರೋಟರಿ ಕ್ಲಬ್‌ನ ಕಾರ್ಯಕ್ರಮದಲ್ಲಿ ಮುಸ್ಲಿಮರು ಏರ್ಪಡಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್ ಭಾಗವಹಿಸಿ ಶುಭ ಕೋರಿದರು. ರೋಟರಿ ಅಧ್ಯಕ್ಷ ಹಸನಬ್ಬ ಶೇಖ್ ವಹಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುನೀಲ್ ಕಬ್ರಾಲ್ ಪರಿಚಯಿಸಿದರು.

ನಿಯೋಜಿತ ರೋಟರಿ ಅಧ್ಯಕ್ಷ ದಯಾನಂದ ಶೆಟ್ಟಿ ದೆಂದೂರು, ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್, ರಹ್ಮತುಲ್ಲಾ ಅಬ್ದುಲ್ ಖಾದರ್, ಉಮರ್ ಇಸ್ಮಾಯೀಲ್, ಪಾದೂರು ರೋಟರಿ ಸಮುದಾಯ ದಳದ ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್, ಪಿ.ಎಂ.ಇಬ್ರಾಹೀಂ, ಅರ್ಪಾಝ್ ಎಚ್.ಎಸ್., ಶಾಹಿಲ್ ಉಮರ್ ಇಸ್ಮಾಯೀಲ್ ಉಪಸ್ಥಿತರಿದ್ದರು.

ರೋಟರಿ ಕಾರ್ಯದರ್ಶಿ ವಿಷ್ಣುಮೂರ್ತಿ ಸರಳಾಯ ವಂದಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News