ಶ್ರೀನಗರ: ಗುಂಡಿಕ್ಕಿ ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ
Update: 2018-06-14 14:56 GMT
ಹೊಸದಿಲ್ಲಿ, ಜೂ.14: ಹಿರಿಯ ಪತ್ರಕರ್ತ, ಶ್ರೀನಗರ ಮೂಲದ ಪತ್ರಿಕೆ ‘ರೈಸಿಂಗ್ ಕಾಶ್ಮೀರ್’ನ ಮುಖ್ಯ ಸಂಪಾದಕ ಶುಜಾತ್ ಬುಖಾರಿಯವರನ್ನು ದುಷ್ಕರ್ಮಿಗಳ ತಂಡವೊಂದು ಗುಂಡಿಕ್ಕಿ ಹತ್ಯೆಗೈದಿರುವ ಬಗ್ಗೆ ವರದಿಯಾಗಿದೆ.
ಶ್ರೀನಗರದ ಪ್ರೆಸ್ ಕಾಲನಿಯಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ದಾಳಿ ನಡೆದಾಗ ಬುಖಾರಿ ತಮ್ಮ ವಾಹನದಲ್ಲಿದ್ದರು ಎನ್ನಲಾಗಿದೆ.
“ಶುಜಾತ್ ಬುಖಾರಿಯವರ ಅಕಾಲಿಕ ಮರಣದಿಂದ ತೀವ್ರ ದುಃಖವಾಗಿದೆ. ಭಯೋತ್ಪಾದನೆಯು ತನ್ನ ಕೆಟ್ಟ ಮುಖವನ್ನು ಈದ್ ಸಂದರ್ಭ ತೋರಿಸಿದೆ. ಈ ದಾಳಿಯನ್ನು ಖಂಡಿಸುತ್ತೇನೆ” ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.