ಮಂಗಳೂರು ಪೊಲೀಸ್ ಆಯುಕ್ತರಾಗಿ ಟಿ.ಆರ್.ಸುರೇಶ್ ಕುಮಾರ್‌ ಮತ್ತೆ ಅಧಿಕಾರ ಸ್ವೀಕಾರ

Update: 2018-06-18 09:00 GMT

ಮಂಗಳೂರು, ಜೂ.18: ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭ ವರ್ಗಾವರ್ಣೆಗೊಂಡಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಇಂದು ಮತ್ತೆ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ನಿರ್ಗಮನ ಪೊಲೀಸ್ ಆಯುಕ್ತರಾದ ವಿಪುಲ್ ಕುಮಾರ್ ಅವರು ಸುರೇಶ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಬಹುತೇಕ ಮಂಗಳೂರಿಗರು ಶಾಂತಿಪ್ರಿಯರು: ವಿಪುಲ್ ಕುಮಾರ್ ಶ್ಲಾಘನೆ
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಗಮನ ಪೊಲೀಸ್ ಕಮಿಷನರ್ ವಿಪುಲ್ ಕುಮಾರ್, ಮಂಗಳೂರಿನ ಜನರು ಶಾಂತಿಪ್ರಿಯರು ಎಂದು ಶ್ಲಾಘಿಸಿದರು.

ಮಂಗಳೂರಿನಲ್ಲಿ ಕೋಮುದ್ವೇಷ ಸಾಮಾನ್ಯ ಎಂಬ ಕೆಟ್ಟ ಹೆಸರಿದೆ. ನನ್ನ ಅನುಭವದ ಪ್ರಕಾರ ಕೆಲವೊಂದು ಅಂತಹ ಘಟನೆಗಳು ನಡೆಯುತ್ತದೆ. ಆದರೆ ಬಹುಪಾಲು ಮಂಗಳೂರಿನ ಜನತೆ ಶಾಂತಿ ಪ್ರಿಯರು. ಅವರಿಗೆ ಶಾಂತಿ, ನೆಮ್ಮದಿ ಬೇಕಾಗಿದೆ. ಕೆಲವೇ ಕೆಲವು ಸಮಾಜದ್ರೋಹಿಗಳಿಂದ ಮಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ಅಂತಹ ಸಮಾಜ ದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸರು ಸಮರ್ಥರಿದ್ದಾರೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News