ಬೆಳ್ತಂಗಡಿ: ಮಾಜಿ ಮುಖ್ಯಮಂತ್ರಿಯನ್ನು ಭೇಟಿಯಾದ ಸಚಿವ ರೇವಣ್ಣ
Update: 2018-06-19 10:17 GMT
ಬೆಳ್ತಂಗಡಿ, ಜೂ. 19: ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೋಕೋಪಯೂಗಿ ಸಚಿವ ರೇವಣ್ಣ ಅವರು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಸಚಿವ ರೇವಣ್ಣ ಅವರು ಇಂದು ಬೆಳಗ್ಗೆ ಚಾರ್ಮಾಡಿ ಘಾಟಿಗೆ ಆಗಮಿಸಿ ಘಾಟಿಯಲ್ಲಿನ ರಸ್ತೆ ಕುಸಿತವನ್ನು ವೀಕ್ಷಿಸಿದರು. ಘಾಟಿಯಲ್ಲಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.