ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಆಸ್ಪತ್ರೆಯಿಂದ ಬಿಡುಗಡೆ

Update: 2018-06-19 17:24 GMT

ಹೊಸದಿಲ್ಲಿ, ಜೂ. 19: ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ವಿರುದ್ಧ ಉಪವಾಸ ಮುಷ್ಕರ ನಡೆಸುತ್ತಿರುವ  ಸಂದರ್ಭ ಆಸ್ಪತ್ರೆ ದಾಖಲಾಗಿದ್ದ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಮಂಗಳವಾರ ಬಿಡುಗಡೆಯಾಗಿದ್ದಾರೆ.

ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಜೈನ್ ಅವರು ರವಿವಾರ ರಾತ್ರಿ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರದಲ್ಲಿ ಕಿಟೋನ್ ಮಟ್ಟ ತ್ವರಿತವಾಗಿ ಏರಿಕೆಯಾದ ಹಾಗೂ ಸಕ್ಕರೆ ಮಟ್ಟ ಇಳಿಕೆಯಾದ ಬಳಿಕ ಸಿಸೋಡಿಯಾ ಅವರು ಸೋಮವಾರ ಇದೇ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರೂ ಸಚಿವರನ್ನು ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗಿದೆ. ಮೂತ್ರದಲ್ಲಿ ಕಿಟೋನ್ ಮಟ್ಟ ಸೇರಿದಂತೆ ಅವರಿಬ್ಬರ ಆರೋಗ್ಯ ಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಎಲ್‌ಎನ್‌ಜೆಪಿ ಆಸ್ಪತ್ರೆಯ ಜೆ.ಸಿ. ಪಾಸ್ಸೆ ತಿಳಿಸಿದ್ದಾರೆ.

‘‘ತ್ವರಿತವಾಗಿ ಗುಣಮುಖನಾಗಿದ್ದೇನೆ. ನಾಳೆಯಿಂದ ಕೆಲಸ ಆರಂಭಿಸಲಿದ್ದೇನೆ’’ ಎಂದು ಸಿಸೋಡಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News