ರಜನಿಕಾಂತ್, ಕಮಲ್ ವಿದೂಷಕರು: ಎಐಎಡಿಎಂಕೆ

Update: 2018-06-22 14:50 GMT

ಚೆನ್ನೈ, ಜೂ. 21: ಎಐಎಡಿಎಂಕೆ ತನ್ನ ಮುಖವಾಣಿ ‘ನಮದು ಅಮ್ಮಾ’ ದಿನಪತ್ರಿಕೆಯಲ್ಲಿ ಚಿತ್ರ ನಿರ್ದೇಶಕಕರ ಗುಂಪಿನೊಂದಿಗೆ ನಟ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರನ್ನು ವಿದೂಷಕರು ಎಂದು ಕರೆದಿದೆ.

 ಜಯಲಲಿತಾ ನಿಧನದ ಬಳಿಕ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿ ಕಮಲ್ ಹಾಸನ್ ಹಾಗೂ ರಜನಿಕಾಂತ್ ಜೋಕರ್ ಗಳಾಗುತ್ತಿದ್ದಾರೆ ಎಂದು ತಮಿಳು ದಿನಪತ್ರಿಕೆ ‘ನಮದು ಅಮ್ಮಾ’ದಲ್ಲಿ ಪ್ರಕಟವಾದ ಕವನದಲ್ಲಿ ಹೇಳಲಾಗಿದೆ. ಎಐಎಡಿಎಂಕೆಯ ದಿನಪತ್ರಿಕೆಯ ಗುರುವಾರದ ಆವೃತ್ತಿಯಲ್ಲಿ ಪ್ರಕಟವಾದ ಈ ಕವನದಲ್ಲಿ ದಿವಂಗತ ಜಯಲಲಿತಾ ಅವರು ಸಂತ ಜಾರ್ಜ್ ಕೋಟೆಗೆ ಭೇಟಿ ನೀಡುವಂತೆ ಹಾಗೂ ವಿದೂಷಕರನ್ನು ನಿಯಂತ್ರಿಸುವಂತೆ ಬೇಡಿಕೊಳ್ಳಲಾಗಿದೆ. ಕಮಲ್ ಹಾಸನ್ ಕಳೆದ ವರ್ಷ ಪೆಬ್ರವರಿಯಲ್ಲಿ ಮಕ್ಕಳ್ ನೀಧಿ ಮೈಯಾಮ್ ಪಕ್ಷವನ್ನು ಆರಂಭಿಸಿದ್ದರು. ರಜನಿಕಾಂತ್ ಕೂಡ ಹೊಸ ಪಕ್ಷ ರಚಿಸುವುದಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಘೋಷಿಸಿದ್ದರು. ಆದರೆ, ಅವರು ಪಕ್ಷದ ಹೆಸರನ್ನು ಅಂತಿಮಗೊಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News