ಅಮೆಮಾರ್: ಬದ್ರಿಯಾ ಮದ್ರಸ ಪುನಾರಂಭ

Update: 2018-06-25 04:54 GMT

ಫರಂಗಿಪೇಟೆ ಜೂ.25: ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್‌ ಅಧೀನದ ಮಿತ್ತಬೈಲ್ ರೇಂಜ್ ವ್ಯಾಪ್ತಿಗೊಳಪಟ್ಟ ಅಮೆಮಾರ್ ಬದ್ರಿಯಾ ಮದ್ರಸ ಪುನಾರಂಭ ಕಾರ್ಯಕ್ರಮ ಶನಿವಾರ ರಾತ್ರಿ ಮದ್ರಸ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಸಮಿತಿಯ ಅಧ್ಯಕ್ಷ ಉಮರಬ್ಬ ಮಾತನಾಡಿ ಶುಭ ಹಾರೈಸಿದರು.

ಧಾರ್ಮಿಕ ಶಿಕ್ಷಣದ ಪ್ರಾಮುಖ್ಯತೆಯ ಕುರಿತು ಮದ್ರಸದ ಮುಖ್ಯ ಅಧ್ಯಾಪಕ ಮುಹಿಯುದ್ದೀನ್ ಅಲ್ ಹಸನಿ, ಮಸೀದಿಯ ಖತೀಬ್ ಅಬೂ ಸ್ವಾಲಿಹ್ ಫೈಝಿ, ಆಡಳಿತ ಸಮಿತಿಯ ಕಾರ್ಯದರ್ಶಿ ಅಬೂ ಸ್ವಾಲಿಹ್ ಉಸ್ತಾದ್ ಮತನಾಡಿದರು.

ಅತಿಥಿಗಳಾಗಿ ಆಡಳಿತ ಸಮಿತಿಯ ಉಪಾಧ್ಯಕ್ಷ ಎಫ್.ಎ.ಖಾದರ್, ಸದಸ್ಯರಾದ ಅಬ್ದುಲ್ ಹಮೀದ್, ಸುಲೈಮಾನ್ ಉಸ್ತಾದ್, ಅಬ್ದುರ್ರಝಾಕ್, ಇಬ್ರಾಹೀಂ, ಮಕ್ಬೂಲ್, ಮದ್ರಸ ಅಧ್ಯಾಪಕರಾದ ಅಬೂಬಕರ್ ಮದನಿ, ಇಸ್ಮಾಯೀಲ್ ಯಮಾನಿ ತಿಂಗಳಾಡಿ, ಸಿರಾಜುದ್ದೀನ್‌ ಮದನಿ, ಉಸ್ಮಾನ್ ಹನೀಫಿ, ಶಬೀರ್ ಮುಸ್ಲಿಯಾರ್, ಮುಅಝ್ಝಿನ್ ಸುಲೈಮಾನ್, ಅದ್ದಾಕ ಹಾಗೂ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News