ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ದಿನಾಚರಣೆ
Update: 2018-07-02 06:36 GMT
ಮಂಜೇಶ್ವರ, ಜು.2: ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ರವಿವಾರ ಪತ್ರಿಕಾ ದಿನ ಆಚರಿಸಲಾಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ, ಪತ್ರಕರ್ತ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು.
ಪತ್ರಕರ್ತರಾದ ರಹ್ಮಾನ್ ಉಪ್ಪಳ, ಸಲಾಂ ವರ್ಕಾಡಿ, ರತನ್ ಕುಮಾರ್ ಹೊಸಂಗಡಿ, ಜಗದೀಶ್ ಪ್ರತಾಪ್ ನಗರ, ರವಿ ಪ್ರತಾಪ್ ನಗರ, ಸಾಯಿಭದ್ರ ರೈ, ಸನಲ್ ಕುಮಾರ್, ಛಾಯಾಗ್ರಾಹಕ ದೀಪಕ್ ರಾಜ್ ಉಪ್ಪಳ ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ಕಾರ್ಯದರ್ಶಿ ರಹಿಮಾನ್ ಉದ್ಯಾವರ ಸ್ವಾಗತಿಸಿದರು. ಅನೀಸ್ ಉಪ್ಪಳ ವಂದಿಸಿದರು.