ನನ್ನ ಮಕ್ಕಳನ್ನು ರಕ್ಷಿಸಿ: ಸುಷ್ಮಾ ಸ್ವರಾಜ್ ನೆರವು ಕೋರಿದ ಮಹಿಳೆ

Update: 2018-07-02 15:21 GMT

ಹೈದರಾಬಾದ್, ಜು. 2: ಮಲೇಶ್ಯಕ್ಕೆ ತೆರಳಿ ಮರಳಿ ಬಾರದ ಇಬ್ಬರು ವ್ಯಕ್ತಿಗಳ ರಕ್ಷಣೆಗಾಗಿ ಅವರ ಕುಟುಂಬ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವು ಕೋರಿದೆ. ಉದ್ಯೋಗ ನೀಡುವ ಆಮಿಷ ತೋರಿಸಿ ಏಜೆಂಟ್‌ ಓರ್ವ ಮಹಮ್ಮದ್ ಬಿಲಾಲಂ ಹಾಗೂ ಮುಹಮ್ಮದ್ ಗೌಸ್ ಅವರನ್ನು ಮಲೇಶ್ಯಕ್ಕೆ ಕರೆದೊಯ್ದಿದ್ದಾರೆ ಎಂದು ಅವರ ತಾಯಿ ಆರೋಪಿಸಿದ್ದಾರೆ.

ನನ್ನ ಮಕ್ಕಳಿಂದ ಅವರು ತಲಾ ಒಂದು ಲಕ್ಷ ರೂ. ತೆಗೆದುಕೊಂಡಿದ್ದಾರೆ. ಮಲೇಶ್ಯಕ್ಕೆ ತಲುಪಿದ ಮೇಲೆ ಅವರ ಪಾಸ್‌ಪೋರ್ಟ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ‘‘ನನ್ನ ಪುತ್ರರು ಏಜೆಂಟ್ ಮುಹಮ್ಮದ್ ಯೂಸುಫ್ ಅವರನ್ನು ಭೇಟಿಯಾಗಿದ್ದರು. ಮಲೇಶ್ಯದಲ್ಲಿ ಉತ್ತಮ ಹಾಗೂ ವೇತನ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದರು’’ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News