ಬದಿಯಡ್ಕ: ಬೈಕಿನಲ್ಲಿ ತೆರಳುತ್ತಿದ್ದ ಯುವಕನಿಗೆ ಖಾರದ ಪುಡಿ ಎರಚಿ ನಗ-ನಗದು ದರೋಡೆ

Update: 2018-07-03 07:06 GMT

 ಕಾಸರಗೋಡು, ಜು.3: ಬೈಕಿನಲ್ಲಿ ಸಂಚರಿಸುತ್ತಿದ್ದ ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ ನಗದು ಹಾಗೂ ಚಿನ್ನಾಭರಣ ಎಗರಿಸಿದ ಘಟನೆ ಬಾಡೂರು ಎಂಬಲ್ಲಿ ನಡೆದಿದೆ.

ಮೊಗ್ರಾಲ್ ನಿವಾಸಿ ಸುಹೈಲ್(28) ದರೋಡೆಗೊಳಗಾದವರು. ಇವರು ಸೋಮವಾರ ಸಂಜೆ ಬೈಕಿನಲ್ಲಿ ತೆರಳುತ್ತಿದ್ದಾಗ ಇನ್ನೊಂದು ಬೈಕಿನಲ್ಲಿ ಬಂದ ತಂಡ ಈ ಕೃತ್ಯ ಎಸಗಿದೆ.

ಸುಹೈಲ್ ಪೆರ್ಲದಲ್ಲಿರುವ ಸಹೋದರಿ ಮನೆಗೆ ಚಿನ್ನಾಭರಣ ಮತ್ತು ಹಣದೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ತಂಡ ಕಣ್ಣಿಗೆ ಖಾರದ ಪುಡಿ ಎರಚಿದೆ. ಬಳಿಕ ಸುಹೈಲ್ ಅವರಲ್ಲಿದ್ದ 15 ಪವನ್ ಚಿನ್ನಾಭರಣ ಹಾಗೂ 90 ಸಾವಿರ ರೂ. ನಗದನ್ನು ದೋಚಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News