ಪ್ಲಾಸ್ಟಿಕ್ ಡೇರೆಯಲ್ಲಿ ಇದ್ದ ಕುಟುಂಬಕ್ಕೆ ಶಾಸಕರಿಂದ ಹಕ್ಕು ಪತ್ರ ವಿತರಣೆ

Update: 2018-07-07 12:48 GMT

ಕಾವೂರು, ಜು.7: ಇಲ್ಲಿನ ಆಕಾಶಭವನ ಸೂಜಿಕಲ್ಲು ಗುಡ್ಡ ಎಂಬಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ಪ್ಲಾಸ್ಟಿಕ್ ಡೇರೆಯಲ್ಲಿ ವಾಸಿಸುತ್ತಿದ್ದ ಬೇಬಿ ಮತ್ತು ಅವರ ಕುಟುಂಬಕ್ಕೆ ಒಂದೇ ವಾರದಲ್ಲಿ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದ್ದ ಶಾಸಕ ಡಾ.ವೈ.ಭರತ್ ಶೆಟ್ಟಿ ಶನಿವಾರ ಭೇಟಿ ನೀಡಿ ಹಕ್ಕು ಪತ್ರ ವಿತರಿಸಿದರು.

ಕಳೆದ ಜು. 2ರಂದು ಭೇಟಿ ನೀಡಿ ಈ ಕುಟುಂಬ ವಾಸಿಸುತ್ತಿದ್ದ ಸ್ಥಿತಿ ಕಂಡು ಒಂದು ವಾರದಲ್ಲಿ ಹಕ್ಕು ಪತ್ರ ಸಿದ್ಧಪಡಿಸುವಂತೆ ಕಂದಾಯ ಅಧಿಕಾರಿಗಳಲ್ಲಿ ಸೂಚಿಸಿದ್ದೆ. ಇದೀಗ ಕೊಟ್ಟ ಮಾತಿನಂತೆ ವಿತರಿಸಿದ್ದೇನೆ ಎಂದವರು ಹೇಳಿದ್ದಾರೆ.

ಮಳೆ ಗಾಲ ಮುಗಿದ ತತ್‌ಕ್ಷಣ ಪರಿಶಿಷ್ಟ ಜಾತಿ ,ಪಂಗಡಕ್ಕೆ ಸಿಗುವ ಅನುದಾನದಡಿ ಮನೆ ನಿರ್ಮಿಸಿಕೊಡಲಾಗುವುದು . ಈ ಬಗ್ಗೆ ಕಂದಾಯ ಅಧಿಕಾರಿ ಹಾಗೂ ಸಂಬಂದ ಪಟ್ಟ ಇಲಾಖೆಯ ಅಧಿಕಾರಿಗಳಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಡಾ.ವೈ ಭರತ್ ಶೆಟ್ಟಿ ಹೇಳಿದರು.

ಈ ಸಂದರ್ಭ ಕೃತಜ್ಞತೆ ಅರ್ಪಿಸಿದ ಸಂತ್ರಸ್ಥೆ ಬೇಬಿ ಅವರು ಇಷ್ಟು ಬೇಗ ನಮ್ಮ ಭೂಮಿ,ನಮ್ಮ ಮನೆಯ ಕನಸು ನನಸಾಗುವುದೆಂದು ತಿಳಿದಿರಲಿಲ್ಲ. ದೇವರಂತೆ ಬಂದು ನಮಗೆ ಶಾಸಕರು ಹಕ್ಕು ಪತ್ರ ಕೊಟ್ಟಿದ್ದಾರೆ. ಬಿಜೆಪಿ ಮುಖಂಡರಾದ ಸುಚೇತನ್, ಆನಂದ ಪಾಂಗಳ, ಭರತ್ ರಾಜ್, ಸೋಮನಾಥ್ ಮತಿತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News