ಕಾರ್ಯಕರ್ತರಿಂದ ಬಂಟ್ವಾಳದಲ್ಲಿ ಅದ್ಧೂರಿ ಸ್ವಾಗತ-ಅಭಿನಂದನೆ

Update: 2018-07-11 11:13 GMT

ಬಂಟ್ವಾಳ, ಜು. 11: ಎಸ್‌ಡಿಪಿಐ ರಾಜ್ಯಾಧಕ್ಷರಾಗಿ ಆಯ್ಕೆಯಾಗಿರುವ ಇಲ್ಯಾಸ್ ಮುಹಮ್ಮದ್ ತುಂಬೆ ಅವರನ್ನು ಮಂಗಳವಾರ ರಾತ್ರಿ ಬಿ.ಸಿರೋಡ್ ಕೈಕಂಬದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಸ್ವಾಗತಿಸಿ, ಅಭಿನಂದಿಸಿದರು. 

ರಾಜ್ಯ ಕಾರ್ಯಾದರ್ಶಿ ಅಕ್ರಮ್ ಹಸನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್ ಅವರು  ಇಲ್ಯಾಸ್ ಮುಹಮ್ಮದ್ ಅವರನ್ನು ಸ್ವಾಗತಿಸಿದರು. 

ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಕಾರ್ಯದರ್ಶಿ ಇಸ್ಮಾಯಿಲ್ ಬಾವ, ಇಸಾಕ್ ತಲಪಾಡಿ, ಸತ್ತಾರ್ ಕಲ್ಲಡ್ಕ, ಅನ್ವರ್ ಆಲಡ್ಕ, ಪುರಸಭಾ ಸದಸ್ಯ ಮುನೀಶ್ ಅಲಿ, ಅಹ್ಮದ್, ಸಿದ್ದೀಕ್ ನಂದರಬೆಟ್ಟು, ಅಕ್ಬರ್ ಅಲಿ ಪೊನ್ನೋಡಿ, ಇಕ್ಬಾಲ್, ಶಾಹುಲ್ ಹಮೀದ್ ಪುರಸಭಾ ವ್ಯಾಪ್ತಿಯ ಗೂಡಿನಬಳಿ, ಆಲಡ್ಕ, ಅಕ್ಕರಂಗಡಿ, ಬಂಟ್ವಾಳ, ಪರ್ಲಿಯಾ, ಮದ್ದ, ತಲಪಾಡಿ ಬ್ರಾಂಚ್ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News