ಮದ್ಯ ನಿಷೇಧ ಕಾನೂನು ಸಡಿಲಗೊಳಿಸಿದ ನಿತೀಶ್ ಕುಮಾರ್

Update: 2018-07-11 17:56 GMT

ಪಾಟ್ನಾ, ಜು.11: ರಾಜ್ಯದಲ್ಲಿ ಜಾರಿಯಲ್ಲಿರುವ ಮದ್ಯ ನಿಷೇಧ ಕಾನೂನನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಸಡಿಲಗೊಳಿಸಿದ್ದಾರೆ. ಆಮೂಲಕ ಮದ್ಯ ಸಾಗಾಟ ಮಾಡುವ ವಾಹನ ಹಾಗೂ ಸ್ಥಳವನ್ನು ಜಪ್ತಿ ಮಾಡುವ ಕ್ರಮಕ್ಕೆ ಕೊನೆ ಹಾಡಲಾಗಿದೆ. ಬಿಹಾರ ಸರಕಾರವು ಮದ್ಯ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಕಾನೂನನ್ನು ರಾಜ್ಯ ವಿಧಾನಸಭೆಯ ಮುಂದಿನ ಮಾನ್ಸೂನ್ ಅಧಿವೇಶನದಲ್ಲಿ ಮಂಡಿಸಲಿದೆ ಎಂದು ಸಂಪುಟ ಕಾರ್ಯದರ್ಶಿ ಅರುಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಮದ್ಯ ನಿಷೇಧ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಬಂದಿರುವ ದೂರುಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವುದಾಗಿ ನಿತೀಶ್ ಕುಮಾರ್ ಕಳೆದ ತಿಂಗಳು ತಿಳಿಸಿದ್ದರು. ಸದ್ಯ ಈ ಕಾಯ್ದೆಯು ಅತ್ಯಂತ ಕಠಿಣವಾಗಿದ್ದು ತಿದ್ದುಪಡಿ ತರುವ ಮೂಲಕ ಜನರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News