ತೆಂಕ ಎಡಪದವು ನಿವಾಸಿ ತಿರುಪತಿಯಲ್ಲಿ ನಾಪತ್ತೆ

Update: 2018-07-19 04:58 GMT

ಮಂಗಳೂರು, ಜು.19: ಆಂಧ್ರ ಪ್ರದೇಶದ ಶ್ರಿಕಾಕುಲಂ ಎಂಬಲ್ಲಿಗೆ ಮಂಗಳೂರಿನಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತೆಂಕ ಎಡಪದವು ನಿವಾಸಿಯೊಬ್ಬರು ದಾರಿಮಧ್ಯೆ ನಾಪತ್ತೆಯಾರುವ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಡಪದವು ಶಿಬ್ರಿಕೆರೆ ನಿವಾಸಿ ಸುಬ್ರಾಯ ಕಾರಂತ್(78) ನಾಪತ್ತೆಯಾದವರು. ಇವರು ಜುಲೈ 14ರಂದು ರಾತ್ರಿ 11 ಗಂಟೆಗೆ ಪತ್ನಿಯೊಂದಿಗೆ ಮಂಗಳೂರು ರೈಲು ನಿಲ್ದಾಣದಿಂದ ವಿವೇಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶ್ರೀಕಾಕುಲಂಗೆ ಹೊರಟಿದ್ದರು. ಆದರೆ ಜು.15ರಂದು ಮಧ್ಯಾಹ್ನ 12:30ರ ಬಳಿಕ ಸುಬ್ರಾಯ ಕಾರಂತ್ ರೈಲಿನಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ.

ಪ್ರಯಾಣದ ಮಧ್ಯೆ ತಿರುಪತಿ ನಿಲ್ದಾಣದಲ್ಲಿ ರೈಲು ನಿಂತಿದ್ದ ವೇಳೆ ಸುಬ್ರಾಯ ಅವರು ಇಳಿದಿದ್ದರೆಂಬ ಮಾಹಿತಿ ಮನೆಯವರಿಗೆ ಲಭಿಸಿದೆ. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಮಾತನಾಡಬಲ್ಲ ಸುಬ್ರಾಯ ಅವರ ಬಗ್ಗೆ ಯಾವುದೇ ಮಾಹಿತಿ ಲಭಿಸಿದಲ್ಲಿ ಮೊಬೈಲ್ ಸಂಖ್ಯೆ: 9686300153, 9849291995, 9989105331 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News