ಕುಂಬಳೆ ಬದರ್ ಜುಮಾ ಮಸೀದಿಗೆ ನುಗ್ಗಿ ಕಾಣಿಕೆ ಪೆಟ್ಟಿಗೆಯಿಂದ ಹಣ ದೋಚಿದ ಕಳ್ಳರು

Update: 2018-07-21 18:55 GMT

ಮಂಜೇಶ್ವರ,ಜು.21 : ಕುಂಬಳೆ ಪೇಟೆಯಲ್ಲಿರುವ ಬದರ್ ಜುಮಾ ಮಸೀದಿಗೆ ಕಳ್ಳರು ನುಗ್ಗಿ ಕಳ್ಳತನ ನಡೆಸಿದ ಘಟನೆ ವರದಿಯಾಗಿದೆ. ಮಸೀದಿಯೊಳಗಿದ್ದ ಎರಡು ಕಾಣಿಕೆ ಪೆಟ್ಟಿಗೆಗಳಲ್ಲಿದ್ದ ಹಣವನ್ನು ದೋಚಿದ್ದಾರೆ. 

ಇದು ಈ ಮಸೀದಿಯಲ್ಲಿ ನಡೆದ ಮೂರನೇ ಕಳವು ಪ್ರಕರಣವಾಗಿದೆ. ಎರಡು ವರ್ಷಗಳ  ಹಿಂದೆ ಈ ಮಸ ದಿಯ ಖತೀಬ್  ಉಮರ್ ಹುದವಿಯವರ ಕೊಠಡಿಯ ಬೀಗ ಮುರಿದು 50ಸಾವಿರ ರೂ ಮೌಲ್ಯದ ರಾಡೋ ವಾಚ್ ಹಾಗೂ 11,500 ರೂ. ನಗದು ಕಳವು ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳನ್ನು ಸೆರೆಹಿಡಿದ ಪೊಲೀಸರು ಕರ್ನಾಟಕದಲ್ಲಿ  ಮಾರಾಟಗೈದಿದ್ದ ವಾಚನ್ನು ವಶಪಡಿಸಿಕೊಂಡಿದ್ದರು.

ಆದರೆ ಆ ಘಟನೆಯ ಮೊದಲು ಖತೀಬ್ ಆಗಿದ್ದ ಸಲಾಂ ಫೈಝಿ ಎಂಬವರ ಕೊಠಡಿಯಿಂದಲೂ 7500 ರೂ. ಕಳವು ನಡೆದಿತ್ತು. ಆ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆಹಚ್ಚಲಾಗಲಿಲ್ಲ ಇದೀಗ ಮತ್ತೆ ಇದೇ ಮಸೀದಿಯಿಂದ ಕಳವು ನಡೆದಿದೆ.

ಈ ಬಗ್ಗೆ ಲಭಿಸಿದ ದೂರಿನಂತೆ ಕುಂಬಳೆ ಎಸ್‌ಐ ಟಿ.ವಿ. ಅಶೋ ಕನ್ ಸ್ಥಳಕ್ಕೆ ತಲುಪಿ ಪರಿಶೀಲಿಸಿದ್ದು, ತನಿಖೆ ಆರಂಭಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News