ಸಿಂಹಗಳ ದಾಳಿಯಿಂದ ಮಾಲಕನನ್ನು ಕಾಪಾಡಿದ ಸಾಕುನಾಯಿ

Update: 2018-07-22 09:40 GMT

ರಾಜ್ ಕೋಟ್, ಜು.22: ಮೂರು ಸಿಂಹಗಳಿಂದ ದಾಳಿಗೊಳಗಾದ ವ್ಯಕ್ತಿಯೊಬ್ಬರನ್ನು ನಾಯಿಯೊಂದು ರಕ್ಷಿಸಿರುವ ಘಟನೆ ರಾಜ್ ಕೋಟ್ ನ ಅಂಬಾರ್ದಿ ಗ್ರಾಮದಲ್ಲಿ ನಡೆದಿದೆ.

ಸಿಂಹಗಳ ದಾಳಿಯಿಂದ 25 ವರ್ಷದ ಭವೇಶ್ ಹಾಮಿರ್ ಭರ್ವಾಡ್ ರ ಬೆನ್ನು ಹಾಗು ಕೈಗಳಿಗೆ ಗಾಯಗಳಾಗಿವೆ. ಸವರ್ಕುಂಡ್ಲಾದ ಸರಕಾರಿ ಆಸ್ಪತ್ರೆಯೊಂದರಲ್ಲಿ ಭವೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂಬಾರ್ದಿ ಗ್ರಾಮದ ಹೊರಭಾಗದಲ್ಲಿ ಭವೇಶ್ ಕುರಿ ಮತ್ತು ಆಡುಗಳನ್ನು ಮೇಯಿಸುತ್ತಿದ್ದರು. ಎಲ್ಲಿಂದಲೋ ಬಂದಿದ್ದ ಸಿಂಹಗಳು ಕುರಿಗಳ ಮೇಲೆ ಎರಗಿದ್ದಲ್ಲದೆ, ಮೂರನ್ನು ಕೊಂದು ಹಾಕಿತ್ತು. ತನ್ನ ಕುರಿಗಳನ್ನು ರಕ್ಷಿಸಲು ಭವೇಶ್ ಯತ್ನಿಸಿದ್ದು, ಒಂದು ಸಿಂಹ ಅವರ ಮೇಲೆಯೂ ದಾಳಿ ಮಾಡಿತ್ತು. ಇದನ್ನು ನೋಡಿದ ನಾಯಿ ಬೊಗಳಲು ಆರಂಭಿಸಿತ್ತದೆ, ಸಿಂಹಗಳನ್ನು ತಡೆದಿತ್ತು. ನಾಯಿ ಬೊಗಳುತ್ತಲೇ ಇದ್ದುದನ್ನು ಕೇಳಿದ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಸಿಂಹಗಳನ್ನು ಓಡಿಸಿದ್ದರು.

ಭವೇಶ್ ರನ್ನು ಆಸ್ಪತ್ರೆಗೆ ದಾಖಲಿಸಿದ ಗ್ರಾಮಸ್ಥರು ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News