ಶಿರೂರು ಶ್ರೀ ನಿಗೂಢ ಸಾವು ಪ್ರಕರಣ: ರಮ್ಯಾ ಶೆಟ್ಟಿ ಪೊಲೀಸರ ವಶಕ್ಕೆ
Update: 2018-07-24 05:15 GMT
ಮಂಗಳೂರು, ಜು. 24: ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ರಮ್ಯಾ ಶೆಟ್ಟಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ರಮ್ಯಾ ಶೆಟ್ಟಿ ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ನಿನ್ನೆ ರಾತ್ರಿ ಅಳದಂಗಡಿ ಬಳಿ ಟೈರ್ ಪಂಕ್ಚರ್ ಆಗಿ ಗ್ಯಾರೇಜ್ ಬಳಿ ನಿಂತಿದ್ದ ಕಾರನ್ನು ವೇಣೂರು ಪೊಲೀಸರು ಪರಿಶೀಲನೆ ನಡೆಸಿದಾಗ ಮೂವರು ಮಹಿಳೆಯರೊಂದಿಗೆ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ರಮ್ಯಾ ಶೆಟ್ಟಿ ಪತ್ತೆಯಾದರು. ರಮ್ಯಾ ಶೆಟ್ಟಿ ಸೇರಿದಂತೆ ನಾಲ್ವರು ಮಹಿಳೆಯರು, ಕಾರು ಚಾಲಕ ಮತ್ತು ಅವರು ಪ್ರಯಾಣಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ವೇಣೂರು ಪೊಲೀಸರು ರಮ್ಯಾ ಶೆಟ್ಟಿಯನ್ನು ತನಿಖೆಗಾಗಿ ಉಡುಪಿ ಪೊಲೀಸರ ವಶಕ್ಕೆ ಒಪ್ಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.