ಶ್ರೀನಗರ:ಭಯೋತ್ಪಾದಕರ ಗುಂಡಿಗೆ ಯೋಧ ಬಲಿ,ಇಬ್ಬರಿಗೆ ಗಾಯ
Update: 2018-07-24 17:28 GMT
ಶ್ರೀನಗರ,ಜು.24: ಇಲ್ಲಿಯ ಬಾಟಾಮಲೂ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಓರ್ವ ಯೋಧ ಮೃತಪಟ್ಟಿದ್ದು,ಇತರ ಇಬ್ಬರು ಗಾಯಗೊಂಡಿದ್ದಾರೆ.
ಸಿಆರ್ಪಿಎಫ್ ಗಸ್ತುಪಡೆ ಬಾಟಾಮಲೂ ಪ್ರದೇಶದ ಬಾಲಗಾರ್ಡನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಭಯೋತ್ಪಾದಕರು ಅವರ ಮೇಲೆ ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದಾರೆ.
ಮೃತ ಯೋಧನನ್ನು ಶಂಕರಲಾಲ್ ಎಂದು ಹೆಸರಿಸಲಾಗಿದ್ದು,ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.