ಚೆರ್ಕಳಂ ಅಬ್ದುಲ್ಲಾರ ಅಂತಿಮ ದರ್ಶನ ಪಡೆದ ಎ.ಪಿ. ಉಸ್ತಾದ್

Update: 2018-07-27 05:59 GMT

ಮಂಜೇಶ್ವರ, ಜು.27: ಇಂದು ಬೆಳಗ್ಗೆ ನಿಧನರಾದ ಹಿರಿಯ ರಾಜಕಾರಣಿ, ಮುಸ್ಲಿಂ ಲೀಗ್ ಮುಖಂಡ ಚೆರ್ಕಳಂ ಅಬ್ದುಲ್ಲಾ ಅವರ ನಿವಾಸಕ್ಕೆ ಭೇಟಿ ನೀಡಿದ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮೃತರ ಅಂತಿಮ ದರ್ಶನ ಪಡೆದರು.

ಈ ಸಂದರ್ಭ ಎ.ಪಿ. ಉಸ್ತಾದ್‌ರೊಂದಿಗೆ ಎಸ್.ವೈ.ಎಸ್. ಕೇರಳ ರಾಜ್ಯ ಉಪಾಧ್ಯಕ್ಷ ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಬಿ.ಎಸ್.ಅಬ್ದುಲ್ಲ ಕುಂಞಿ ಫೈಝಿ, ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News