ಹಿರಿಯ ಪ್ರಭಾವಿ ನಾಯಕನ ನಿರ್ಗಮನ: ಬಿ.ಎ.ಮೊಹಿದೀನ್ ನಿಧನಕ್ಕೆ ರಾಹುಲ್ ಗಾಂಧಿ ಸಂತಾಪ

Update: 2018-07-29 16:24 GMT

ಮಂಗಳೂರು, ಜು.29: ಇತ್ತೀಚೆಗೆ ನಿಧನರಾದ ಹಿರಿಯ ಮುತ್ಸದ್ದಿ, ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಿ.ಎ. ಮೊಹಿದೀನ್ ಅವರ ನಿಧನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬಿ.ಎ.ಮೊಹಿದೀನ್ ಅವರ ಪತ್ನಿಗೆ ಕಳುಹಿಸಿರುವ ಸಂತಾಪ ಸೂಚಕ ಸಂದೇಶದಲ್ಲಿ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಪಕ್ಷವು ಹಿರಿಯ ಹಾಗೂ ಪ್ರಭಾವಿ ನಾಯಕರೊಬ್ಬರನ್ನು ಕಳೆದುಕೊಂಡಿದೆ. ಅವರ ಅಗಲುವಿಕೆ ತೀವ್ರ ಶೋಕ ಉಂಟು ಮಾಡಿದೆ. ಈ ಅವಸರದಲ್ಲಿ ನಿಮ್ಮ ದುಃಖದಲ್ಲಿ ನಾನು ಭಾಗಿಯಾಗುವೆ, ನಿಮಗೆ ಹಾಗೂ ನಿಮ್ಮ ಕುಟಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News