ಕಟೀಲು ದೇವಳದ ಅರ್ಚಕರ ಮನೆಗೆ ತೆರಳಿ ಸಾಂತ್ವನ ಹೇಳಿದ ಯು.ಟಿ.ಖಾದರ್
Update: 2018-07-29 11:16 GMT
ಮಂಗಳೂರು, ಜು.29: ಇತ್ತೀಚೆಗೆ ನೆಲಮಂಗಲದಲ್ಲಿ ನಡೆದ ವಾಹನ ಅಪಘಾತದಲ್ಲಿ ಪುತ್ರನನ್ನು ಕಳೆದುಕೊಂಡ ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣ ಅಸ್ರಣ್ಣರವರ ಮನೆಗೆ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ರವಿವಾರ ತೆರಳಿ ಮನೆಮಂದಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಸಚಿವರ ಜೊತೆ ಈಶ್ವರ್ ಉಳ್ಳಾಲ್, ಸಂತೋಷ್ ಶೆಟ್ಟಿ ಅಸೈಗೋಳಿ, ಪ್ರಶಾಂತ್ ಕಾಜವ ಕುರ್ನಾಡು, ಸದಾಶಿವ ಉಳ್ಳಾಲ, ಮೋನಪ್ಪಶೆಟ್ಟಿ ಎಕ್ಕಾರು, ರಮೇಶ್ ಅರ್ಕುಳ, ಶಿವಪ್ರಸಾದ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಲಕ್ಷ್ಮೀಶ್ಗಟ್ಟಿ, ಕಿಶೋರ್ ಗಟ್ಟಿ, ಲವೀಶ್ ಶೆಟ್ಟಿ, ಅರುಣ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.