ಮರಾಠಾ ಮೀಸಲಾತಿಗಾಗಿ: ವ್ಯಕ್ತಿ ಆತ್ಮಹತ್ಯೆ

Update: 2018-07-31 18:07 GMT

ಮುಂಬೈ, ಜು. 31: ಮರಾಠಾ ಮೀಸಲಾತಿ ಬೇಡಿಕೆ ಕುರಿತಂತೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ 38 ವರ್ಷದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 ಮುಂಬೈಯಿಂದ 570 ಕಿ.ಮೀ. ದೂರದಲ್ಲಿರುವ ನಾಂದೇಡ್‌ನ ಧಾಬಾದ್ ಗ್ರಾಮದಲ್ಲಿರುವ ಮನೆಯ ಕೊಠಡಿಯಲ್ಲಿ ಕಚರು ಕಲ್ಯಾನೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭ ಮನೆಯಲ್ಲಿ ಕುಟುಂಬದ ಸದಸ್ಯರು ಯಾರೂ ಇರಲಿಲ್ಲ. ಕಲ್ಯಾನೆ ಮೃತದೇಹದ ಬಳಿ ಸುಸೈಡ್ ನೋಟ್ ಪತ್ತೆಯಾಗಿದೆ. ಈ ಸುಸೈಡ್ ನೋಟ್‌ನಲ್ಲಿ ಮರಾಠಿ ಮೀಸಲಾತಿಗೆ ಆಗ್ರಹಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಸೈಡ್ ನೋಟ್‌ನ ವಿಶ್ವಾಸಾರ್ಹತೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News