ಸಾಲಬಾಧೆ: ಕೃಷಿಕ ಆತ್ಮಹತ್ಯೆ

Update: 2018-08-03 16:51 GMT

ಹಿರಿಯಡ್ಕ, ಆ.3: ರೈತರ ಸಂಘದಲ್ಲಿ ಮಾಡಿದ ಸಾಲವನ್ನು ಪಾವತಿಸಲಾಗದೆ ಕೃಷಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈರಂಪಳ್ಳಿ ಗ್ರಾಮದ ದೂಪದ ಕಟ್ಟೆ ಎಂಬಲ್ಲಿ ಆ.2ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ದೂಪದಕಟ್ಟೆಯ ಶ್ರೀನಿವಾಸ ಶೆಟ್ಟಿ (55) ಎಂದು ಗುರುತಿಸ ಲಾಗಿದೆ.

ಇವರು ಅಡಿಕೆ, ತೆಂಗು, ಭತ್ತದ ಕೃಷಿ ಮಾಡಿಕೊಂಡಿದ್ದು ಅದಕ್ಕಾಗಿ ರೈತರ ಸಹಕಾರಿ ಸಂಘ ಹರಿಕಂಡಿಗೆ ಶಾಖೆಯಿಂದ ಸಾಲ ಪಡೆದುಕೊಂಡಿದ್ದರು. ಕೃಷಿಗೆ ಸರಿಯಾದ ಉತ್ಪತ್ತಿ ಸಿಗದಿದ್ದರಿಂದ ನಷ್ಟ ಅನುಭವಿಸಿದ ಅವರು, ರೈತರ ಸಂಘದಲ್ಲಿ ಮಾಡಿದ ಸಾಲವನ್ನು ಕಟ್ಟಲಾಗದೆ ಮಾನಸಿಕವಾಗಿ ನೊಂದು ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News