ಅಕ್ರಮ ದನ ಸಾಗಾಟ: ಓರ್ವ ಸೆರೆ

Update: 2018-08-03 16:53 GMT

ಬೈಂದೂರು, ಆ.3: ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರು ಮಂದಿಯಲ್ಲಿ ಓರ್ವನನ್ನು ಬೈಂದೂರು ಪೊಲೀಸರು ಶಿರೂರು ಚೆಕ್‌ಪೋಸ್ಟ್ ಬಳಿ ಆ.3ರಂದು ಬೆಳಗಿನ ಜಾವ ಬಂಧಿಸಿದ್ದಾರೆ.

ಪೊಲೀಸ್ ಕಾರ್ಯಾಚರಣೆಯ ವೇಳೆ ಪಿಕಪ್ ವಾಹನವನ್ನು ಬಿಟ್ಟು ಓಡಿ ಹೋಗುತ್ತಿದ್ದ ಆರು ಮಂದಿಯ ಪೈಕಿ ಭಟ್ಕಳದ ಸೈಯದ್ ರಫೀಕ್(42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪರಾರಿಯಾದವರನ್ನು ಮುಕ್ ಬುಲ್, ರಾಜು, ಸುಬ್ಬಯ್ಯ ಮೊಗೇರಿ, ರವಿ ಗುರಾಮಕ್ಕಿ, ರಮೇಶ್ ಬರಾಮಕ್ಕಿ ಎಂದು ಗುರುತಿಸಲಾಗಿದೆ.

ಮೂರು ಲಕ್ಷ ರೂ. ಮೌಲ್ಯದ ವಾಹನ ಹಾಗೂ ಅದರಲ್ಲಿದ್ದ 45,000 ರೂ. ಮೌಲ್ಯದ ಮೂರು ಕೋಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News