ಹಳೆಯಂಗಡಿ: ರಸ್ತೆ ಅಪಘಾತಕ್ಕೆ ದ್ವಿಚಕ್ರ ಸವಾರ ಬಲಿ

Update: 2018-08-04 05:22 GMT

ಹಳೆಯಂಗಡಿ, ಆ. 4: ಪಾವಂಜೆಯಿಂದ ಎನ್ಐಟಿಕೆ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ವೇಳೆ ಸ್ಕೋರ್ಪಿಯೋ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಶನಿವಾರ ಬೆಳಗ್ಗೆ ಪಾವಂಜೆ ಸಮೀಪ ನಡೆದಿದೆ. 

ದ್ವಿಚಕ್ರ ವಾಹನ ಸವಾರ ರವೀಂದ್ರ ಪೂಜಾರಿ (44) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟವರು ಎಂದು ಗುರುತಿಸಲಾಗಿದೆ. 

ರವೀಂದ್ರ ಅವರು ಇಂದು ಬೆಳಗ್ಗೆ ಪಾವಂಜೆಯಿಂದ ಸ್ಕೂಟರ್ ನಲ್ಲಿ ಎನ್ಐಟಿಕೆ ಕಡೆಗೆ ತೆರಳುತಿದ್ದರು. ಈ ಸಂದರ್ಭ ಸ್ಕೋರ್ಪಿಯೋ ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ ಎಂದು ತಿಳಿದುಬಂದಿದೆ. ಗಂಭೀರ ಗಾಯಗೊಂಡ ರವೀಂದ್ರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತಿದ್ದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News