ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾಟ: ಕುಮಿಟೆ ವಿಭಾಗದಲ್ಲಿ ಮುಹಮ್ಮದ್ ಅಕ್ಫಲ್ ಪ್ರಥಮ
Update: 2018-08-08 13:00 GMT
ಪಡುಬಿದ್ರೆ, ಆ. 8: ಜೆಎಸ್ಕೆಎ ವತಿಯಿಂದ ಕಾಸರಗೋಡಿನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾಟದಲ್ಲಿ ಕಡಬದ ಕ್ನಾನಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಅಕ್ಫಲ್ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಇದಕ್ಕೂ ಮೊದಲು ಮಂಗಳೂರಿನಲ್ಲಿ ನಡೆದ ಕರಾಟೆಯಲ್ಲೂ ಪ್ರಥಮ ಸ್ಥಾನ ಪಡೆದಿರುತ್ತಾನೆ. ಈತ ಪಡುಬಿದ್ರೆಯ ನೂರುಲ್ ಹುದಾ ಮದ್ರಸದ ಅಧ್ಯಾಪಕ ಅಶ್ರಫ್ ಸಅದಿ ಒರೋಡಿ ಕಳಾರ ಹಾಗೂ ಕಮರುನ್ನಿಸಾ ದಂಪತಿಯ ಪುತ್ರ.