ಶರವೂರು ಜುಗಾರಿ ಅಡ್ಡೆಗೆ ದಾಳಿ: ಆರು ಮಂದಿ ಸೆರೆ

Update: 2018-08-12 07:27 GMT

ಕಡಬ, ಆ.12. ತಾಲೂಕಿನ ಆಲಂಕಾರು ಗ್ರಾಮದ ಶರವೂರು ಎಂಬಲ್ಲಿನ ಗೇರು ತೋಪಿನಲ್ಲಿ  ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಶನಿವಾರ ಸಂಜೆ ದಾಳಿ ನಡೆಸಿರುವ ಕಡಬ ಪೋಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಆಧಾರದಲ್ಲಿ ಕಡಬ ಎಸ್‍ಐ ಪ್ರಕಾಶ್ ದೇವಾಡಿಗ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, ಆಲಂಕಾರಿನ ರಘುನಾಥ (42), ವಸಂತ ಹಳೆನೇರೆಂಕಿ (30), ರವಿ ಕೊಂಡಾಡಿಕೊಪ್ಪ (35), ಮತ್ತಪ್ಪ ಶರವೂರು (57), ಜಿನ್ನಪ್ಪ ಕೊಂಡಾಡಿಕೊಪ್ಪ (62), ಲೋಲಾಕ್ಷ ಶರವೂರು (49) ಎಂಬವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಜುಗಾರಿ ಆಟಕ್ಕೆ ಬಳಸಿದ 12,140 ರೂ. ನಗದು ಹಾಗೂ ಎರಡು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ಸಂದರ್ಭ ಮೂವರು ಪರಾರಿಯಾಗಿದ್ದಾರೆ. ದಾಳಿಯಲ್ಲಿ ಎಎಸ್‍ಐ ಚಂದ್ರಶೇಖರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಮೋನಪ್ಪ ಗೌಡ, ಶಿವಪ್ರಸಾದ್ ಶರತ್, ಕೃಷ್ಣಪ್ಪ, ಚಂದನ್, ಗೋವಿಂದ್, ಸಂದೇಶ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News