ಸರಕಾರದ ಟೀಕಾಕಾರರ ಮೇಲೆ ದಾಳಿ ನಡೆಯುವುದಿಲ್ಲ ಎಂಬ ಭರವಸೆ ಮೋದಿ ನೀಡಲಿ: ಉಮರ್ ಖಾಲಿದ್

Update: 2018-08-14 17:04 GMT

ಹೊಸದಿಲ್ಲಿ, ಆ. 14: ಸರಕಾರದ ವಿರುದ್ಧ ಟೀಕಿಸುವವರನ್ನು ಗುರಿಯಾಗಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಸ್ವಾತಂತ್ರ ದಿನಾಚರಣೆಯ ಭಾಷಣದಲ್ಲಿ ಭರವಸೆ ನೀಡಬೇಕು ಎಂದು ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಸಂಶೋಧನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಮಂಗಳವಾರ ಹೇಳಿದ್ದಾರೆ.

ಸ್ವಾತಂತ್ರ ದಿನಾಚರಣೆ ಭಾಷಣದ ಬಗ್ಗೆ ಸಲಹೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಮನವಿಗೆ ಖಾಲಿದ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ ಜೀ ಅವರೇ, ಸ್ವಾತಂತ್ರ ದಿನಾಚರಣೆಯ ಭಾಷಣದ ಬಗ್ಗೆ ನೀವು ಸಲಹೆ ಕೇಳಿದ್ದೀರಿ. ನಿಮ್ಮ ಸರಕಾರ ಹಾಗೂ ಅದರ ಹಲವು ವಿಫಲತೆಗಳನ್ನು ಟೀಕಿಸುತ್ತಿರುವವರ ವಿರುದ್ಧ ದಾಳಿ ನಡೆಸುವುದಿಲ್ಲ ಎಂದು ನೀವು ಭಾಷಣದಲ್ಲಿ ಭರವಸೆ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿ ಖಾಲಿದ್ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 2016ರಲ್ಲಿ ದೇಶದ್ರೋಹದ ಆರೋಪಕ್ಕೆ ಒಳಗಾದ ಬಳಿಕ ಕಾನೂನು ಹೋರಾಟ ನಡೆಸುತ್ತಿರುವ ಖಾಲಿದ್ ತನ್ನ ಪೋಸ್ಟ್‌ನಲ್ಲಿ ಹೆದರಿ ಮೌನವಾಗಲು ಸೋಮವಾರ ತನ್ನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News