ಉಡುಪಿ: ಮಳೆಯ ವಿರಾಮದ ನಡುವೆ ಸ್ವಾತಂತ್ರ್ಯೋತ್ಸವ

Update: 2018-08-15 04:37 GMT

ಉಡುಪಿ, ಆ.15: ನಾಲ್ಕು ದಿನಗಳ ಸತತ ಮಳೆಯ ಬಳಿಕ ಇಂದು ಮಳೆ ವಿರಾಮ ಪಡೆದ ಹಿನ್ನೆಲೆಯಲ್ಲಿ ದೇಶದ 72ನೇ ಸ್ವಾತಂತ್ರ್ಯೋತ್ಸವನ್ನು ಉಡುಪಿಯಲ್ಲಿ ಎಂದಿನ ಸಡಗರ, ಸಂಭ್ರಮಗಳೊಂದಿಗೆ ಆಚರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ, ಆಕರ್ಷಕ ಪಥ ಸಂಚಲನವನ್ನು ವೀಕ್ಷಿಸಿದರು.

ಬಳಿಕ ನಡೆದ ಸಮಾರಂಭದಲ್ಲಿ ಈ ಬಾರಿಯ ಎಸ್ಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮಗಳಲ್ಲಿ ಜಿಲ್ಲೆ ಗೆ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸಚಿವೆ ಸನ್ಮಾನಿಸಿದರು.

ಮಳೆಯ ಕಾರಣ ಸಮಾರಂಭದಲ್ಲಿ ಭಾಗವಹಿಸಿದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಅಧಿಕಾರಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News