ಮಾಣೂರು: ಇರ್ಷಾದುಲ್ ಇಸ್ಲಾಂ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2018-08-15 05:04 GMT

ಬಂಟ್ವಾಳ, ಆ.15: ತುಂಬೆ ಗ್ರಾಮದ ಮಾಣೂರು ಇರ್ಷಾದುಲ್ ಇಸ್ಲಾಂ ಮದ್ರಸದಲ್ಲಿ ಇಂದು ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಧ್ವಜಾರೋಹಣವನ್ನು ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ನೆರವೇರಿಸಿದರು. ಇರ್ಷಾದುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಎಂ.ಎಚ್.ಹಸನಬ್ಬ ಮಾಣೂರು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಹಮೀದ್ ಮುಸ್ಲಿಯಾರ್, ದೇವಂದಬೆಟ್ಟು ಅಕ್ಬರ್ ಅಲಿ ಸ್ವಾತಂತ್ರ್ಯ ಸಂದೇಶ ನೀಡಿದರು.  ಸ್ಥಳೀಯರಾದ ಎಂ.ಇಬ್ರಾಹಿಂ ಮಾಣೂರು, ಮಜೀದ್, ಇಸ್ಮಾಯೀಲ್, ಶಹರೋಝ್, ಇಮ್ತಿಯಾಝ್ , ನಾಸಿರ್, ಶಹರೋಝ್, ಆದಂ, ಅನೀಝ್, ಆಶಿಕ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News