ಛತ್ತೀಸ್‌ಗಡದ ರಾಜ್ಯಪಾಲೆಯಾಗಿ ಆನಂದಿಬೆನ್ ಪ್ರಮಾಣವಚನ ಸ್ವೀಕಾರ

Update: 2018-08-15 16:31 GMT

ರಾಯಪುರ,ಆ.15: ಮಧ್ಯಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಬುಧವಾರ ಇಲ್ಲಿಯ ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಛತ್ತೀಸ್‌ಗಡದ ರಾಜ್ಯಪಾಲರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಛತ್ತೀಸ್‌ಗಡದ ರಾಜ್ಯಪಾಲರಾಗಿದ್ದ ಬಲರಾಮಜಿ ದಾಸ್ ಟಂಡನ್ ಅವರ ನಿಧನದಿಂದಾಗಿ ಈ ಹೆಚ್ಚುವರಿ ಹೊಣೆಯನ್ನು ಪಟೇಲ್ ಅವರಿಗೆ ವಹಿಸಲಾಗಿದೆ.

ಛತ್ತೀಸ್‌ಗಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಜಯಕುಮಾರ ತ್ರಿಪಾಠಿ ಅವರು ಪ್ರಮಾಣ ವಚನವನ್ನು ಬೋಧಿಸಿದರು.

 ಬಿಜೆಪಿಯ ಮಾತೃಸಂಸ್ಥೆ ಜನಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದ ಟಂಡನ್(90) ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದರು.

ಛತ್ತೀಸ್‌ಗಡಕ್ಕೆ ನೂತನ ರಾಜ್ಯಪಾಲರ ನೇಮಕವಾಗುವವರಗೂ ಪಟೇಲ್ ಹೆಚ್ಚುವರಿ ಹೊಣೆಯನ್ನು ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News