ಆಪ್ ನಾಯಕ ಅಶುತೋಷ್ ರಾಜೀನಾಮೆ ಸ್ವೀಕರಿಸಲು ಕೇಜ್ರಿವಾಲ್

Update: 2018-08-15 18:24 GMT

ಹೊಸದಿಲ್ಲಿ, ಆ. 15: ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ವರಿಷ್ಠ ಅರವಿಂದ್ ಕೇಜ್ರಿವಾಲ್ ಪಕ್ಷದ ನಾಯಕ ಅಶುತೋಷ್ ಸಲ್ಲಿಸಿದ ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ.

 “ನಿಮ್ಮ ರಾಜೀನಾಮೆಯನ್ನು ನಾವು ಹೇಗೆ ಸ್ವೀಕರಿಸಲು ಸಾಧ್ಯ? ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಮಾಜಿ ಟಿವಿ ಪತ್ರಕರ್ತ ಅಶುತೋಷ್, ವೈಯುಕ್ತಿಕ ಕಾರಣದಿಂದ ತಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬುಧವಾರ ಘೋಷಿಸಿದ್ದರು. ‘‘ಪ್ರತಿಯೊಬ್ಬರ ಪಯಣವೂ ಅಂತ್ಯಗೊಳ್ಳುತ್ತದೆ. ಆಪ್‌ನೊಂದಿಗಿನ ನನ್ನ ಸುಂದರ, ಕ್ರಾಂತಿಕಾರಿ ಪಯಣವೂ ಅಂತ್ಯವಾಗಿದೆ. ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಸ್ವೀಕರಿಸುವಂತೆ ರಾಜಕೀಯ ಕ್ರಿಯಾ ಸಮಿತಿಯಲ್ಲಿ ಮನವಿ ಮಾಡಿದ್ದೇನೆ. ವೈಯುಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಬೆಂಬಲ ನೀಡಿದ ಪಕ್ಷ ಹಾಗೂ ಎಲ್ಲರಿಗೂ ವಂದನೆಗಳು’’ ಎಂದು ಅಶುತೋಷ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News