ಕರಾವಳಿ ರಕ್ಷಣಾ ಪಡೆಯಿಂದ ಸ್ವಾತಂತ್ರ ದಿನಾಚರಣೆ

Update: 2018-08-15 18:46 GMT

ಮಂಗಳೂರು, ಆ.15: ಕರಾವಳಿ ರಕ್ಷಣಾ ಪಡೆ (ಕರ್ನಾಟಕ)ಯ ಕೇಂದ್ರ ಕಚೇರಿ ಪಣಂಬೂರಿನಲ್ಲಿ ಇಂದು ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ಕಮಾಂಡರ್ ಡಿಐಜಿ ಎಸ್.ಎಸ್. ದಾಸಿಲಾ ಧ್ವಜಾರೋಹಣಗೈದರು.

ಬಳಿಕ ಮಾತನಾಡಿದ ದಾಸಿಲಾ, ವಿವಿಧತೆಯವಲ್ಲಿ ಏಕತೆಯ ಭಾರತೀಯ ಸಂಸ್ಕೃತಿಯ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು.

ಇದೇ ವೇಳೆ ಕರಾವಳಿ ರಕ್ಷಣಾ ಪಡೆಯ ಮಹಿಳಾ ಅಧಿಕಾರಿಗಳು ಸಮೀಪದ ವಿವಿಧ ಶಾಲೆಗಳಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಎಂದು ಕರಾವಳಿ ರಕ್ಷಣಾ ಪಡೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News