ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜಿಲ್ಲಾ ಎಸ್ ವೈ ಎಸ್ ನಿಂದ ರೋಗಿಗಳಿಗೆ ಹಣ್ಣು ಹಂಪಲು ಮತ್ತು ವಸ್ತ್ರ ವಿತರಣೆ

Update: 2018-08-16 19:07 GMT

ಮಂಗಳೂರು: ಕರ್ನಾಟಕ ರಾಜ್ಯಾದ್ಯಂತ ಎಲ್ಲಾ  ಸೆಂಟರ್ ಗಳಲ್ಲಿ  ಭಾರತ ಬಾರತೀಯರದ್ದಾಗಲಿ ಎಂಬ ಘೋಷ ವಾಕ್ಯದೊಂದಿಗೆ 72 ನೇ ಸ್ವಾತಂತ್ರ್ಯದ ಅಂಗವಾಗಿ ನಗರದ ವೆನ್ಲಾಕ್ ಆಸ್ಪತ್ರೆ ಯ ಸುಮಾರು 700 ರಷ್ಟು ರೋಗಿಗಳಿಗೆ ಹಣ್ಣುಹಂಪಲು ಮತ್ತು ವಸ್ತ್ರ ವಿತರಣಾ ಕಾರ್ಯಕ್ರಮ ಆಗಸ್ಟ್ 16 ರಂದು  ನಡೆಯಿತು.

ಕಾರ್ಯಕ್ರಮದಲ್ಲಿ  ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್,   ರಾಜ್ಯ  ಎಸ್ ವೈ ಎಸ್  ಪ್ರಧಾನ ಕಾರ್ಯದರ್ಶಿ ಎಂಎಸ್ಎಂ ಝೈನಿ ಕಾಮಿಲ್ , ಜಿಲ್ಲಾ ಉಪಾಧ್ಯಕ್ಷ ಮೂಳೂರು ಸಖಾಫಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ, ಕೋಶಾಧಿಕಾರಿ ಹನೀಪ್ ಹಾಜಿ,  ಜಿಲ್ಲಾ ನಾಯಕರುಗಳಾದ ಎಸ್ಎಂ ತಂಙಲ್, ಉಮರ್ ಮಾಸ್ಟರ್, ಬಾವ ಫಕ್ರುದ್ದೀನ್, ಖಲೀಲ್ ಮುಸ್ಲಿಯಾರ್, ಅಬ್ದುಲ್ಲ ಮುಸ್ಲಿಯಾರ್ ,ಎಸ್ಸೆಸ್ಸೆಫ್ ಮಂಗಳೂರು ನಾಯಕರಾದ ಹಸನ್ , ಲತೀಪ್, ನಝೀರ್ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News