ಉಳ್ಳಾಲ: ವಿದ್ಯುತ್ ಆಘಾತಕ್ಕೊಳಗಾಗಿ ಯುವಕ ಮೃತ್ಯು

Update: 2018-08-17 05:58 GMT

ಉಳ್ಳಾಲ, ಆ.17: ತುಂಡಾಗಿ ಬಿದ್ದಿದ್ದ ಹೈಟೆನ್ಶನ್ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟ ಘಟನೆ ಉಳ್ಳಾಲ ಉಳಿಯ ಎಂಬಲ್ಲಿ ನಡೆದಿದೆ.

ಮೃತರನ್ನು ಉಳಿಯ ನಿವಾಸಿ ಅಶೋಕ್ ಡಿಸೋಜ(28) ಎಂದು ಗುರುತಿಸಲಾಗಿದೆ. ನಿನ್ನೆ ತಡರಾತ್ರಿ ಉಳಿಯ ಧರ್ಮರಸರ ಕ್ಷೇತ್ರದ ಬಳಿ ಈ ಅವಘಡ ಸಂಭವಿಸಿದೆ. ಗಾಳಿಮಳೆಯಿಂದ ಹೈಟೆನ್ಶನ್ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಆದರೆ ಈ ಸಂದರ್ಭ ವಿದ್ಯುತ್ ಸಂಪರ್ಕ ಮೊಟಕುಗೊಂಡಿರಲಿಲ್ಲ. ಇದರ ಅರಿವಿಲ್ಲದೆ ಆ ದಾರಿಯಾಗಿ ಸಂಚರಿಸಿದ ಅಶೋಕ್ ಡಿಸೋಜ ಅವರು ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಸ್ಪರ್ಶಿಸಿದ್ದರಿಂದ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News