ನೆರೆ ಪೀಡಿತ ನಂದರಬೆಟ್ಟು: ನಿದ್ದೆ ಬಿಟ್ಟು ಕಾರ್ಯಾಚರಣೆಯಲ್ಲಿ ತೊಡಗಿರುವ ಯುವಕರು
Update: 2018-08-18 06:10 GMT
ಬಂಟ್ವಾಳ, ಆ. 18: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕು, ಬಂಟ್ವಾಳ ಮೂಡ ಗ್ರಾಮದ ನಂದರಬೆಟ್ಟು ನೆರೆ ಪೀಡಿತ ಪ್ರದೇಶವಾಗಿದ್ದು, ಹಲವು ಮನೆಗಳು ಮುಳುಗಿ ಹೋಗಿದ್ದು, ಈ ಸಂದರ್ಭದಲ್ಲಿ ನಂದರಬೆಟ್ಟು ಯುವಕರು ಅರಸಾಹಸಪಟ್ಟು ಮಧ್ಯರಾತ್ರಿಯವರೆಗೂ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಗ್ರಾಮಸ್ಥರಾದ ಸಗೀರ್, ಅನ್ವರ್, ಸಫ್ವಾನ್ ರಿಕ್ಷಾ, ಯಾಸಿರ್, ನಾಸಿರ್ ಲುಲು, ಇಸಾನ್, ಮುನ್ನಾ, ಮುಬಶ್ಶಿರ್, ಹಾಶಿರ್, ಜಾಫರ್, ಆರಿಫ್, ಸಫ್ವಾನ್ ಎಸ್ ಎನ್, ನಿಝಾಮ್, ಅಜ್ಮಾಲ್, ಆರಿಸ್, ಹಾರೂನ್, ಸಿದ್ದೀಕ್, ಹರ್ಮಾನ್, ರಿಝ್ವಾನ್ ದಿನಾರ್, ಅಪ್ಪಿ, ಸಂಬ್ರಾನ್, ಬಾಸಿತ್, ನೌಷಾದ್ ಅವರ ಶ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.